Wednesday, January 2, 2013

ರೂಮಿ ಟೋಪಿ


[ಈ ಲೇಖನವನ್ನ ನಾನು ೧೯೯೦ರಲ್ಲಿ ಬರೆದೆ. ಮೊದಲು ಇದನ್ನ ಎಲ್ಲಿ ಪ್ರಕಟಮಾಡುವುದೋ ತಿಳಿಯಲಿಲ್ಲ. ಆಗ ಬ್ಲಾಗ್ ಇದ್ದಿದ್ದರೆ ಆ ಸಮಸ್ಯೆಯೇ ನನಗೆ ಎದುರಾಗುತ್ತಿರಲಿಲ್ಲ! ಕಡೆಗೆ ಸುಮಾರು ಯೋಚನೆಯ ನಂತರ ಲಂಕೇಶ್‍ಗೆ ಕಳುಹಿಸಿದೆ. ಆದರೆ ಅಲ್ಲಿಂದ ಯಾವ ಜವಾಬಾಗಲೀ ಅಥವಾ ಪ್ರಕಟನೆಯ ಸೂಚನೆಯಾಗಲೀ ಬರಲಿಲ್ಲ. ಒಮ್ಮೆ ತಿರುಮಲೇಶ ನಾನು ಒಟ್ಟಿಗೆ ಬೆಂಗಳೂರಿನಲ್ಲಿರುವ ಸಂದರ್ಭ ಬಂತು ಆಗ ಇಬ್ಬರೂ ಲಂಕೇಶ್ ಅವರನ್ನು ಭೇಟಿಯಾಗಲು ಹೋಗಿದ್ದೆವು. ಮಾತಿನಲ್ಲಿ ಈ ಲೇಖನದ ಪ್ರಸ್ತಾಪ ಬಂತು. ಲಂಕೇಶ್ ಅದನ್ನ ನೋಡೇ ಇರಲಿಲ್ಲ. ಆದರೆ ತಕ್ಷಣ ಲೇಖನದ ಮತ್ತೊಂದು ಪ್ರತಿ ಕಳಿಸಲು ಹೇಳಿದರು. ಪ್ರಕಟವಾದಾಗ ಇದರ ಬಗ್ಗೆ ಟಿಪ್ಪಣಿಯನ್ನೂ ಬರೆದರು. ಆ ನಂತರ ಹೈದರಾಬಾದಿನ ಬಗ್ಗೆ ಹಲವು ಲೇಖನಗಳನ್ನು ಬರೆಯಲು ಲಂಕೇಶ್ ನನ್ನನ್ನು ಪ್ರೊತ್ಸಾಹಿಸಿದರು. ಲ್ಯಾಟಿನ್ ಅಮೆರಿಕನ್ ಸಾಹಿತ್ಯದ ಬಗ್ಗೆ ನನಗಿದ್ದ ಆಸಕ್ತಿ ತಿಳಿದ ನಂತರ ಅವರು ನನ್ನಿಂದ ಕೆಲವು ಕಥೆಗಳನ್ನು ಅನುವಾದ ಮಾಡಿಸಿದ್ದರು. ಈ ಲೇಖನವನ್ನು ಮತ್ತೆ ಇಲ್ಲಿ ಹಾಕುತ್ತಿರುವಾಗ ನನಗೆ ವಿಚಿತ್ರ ಭಾಷೆಯನ್ನು ಬಳಸಿ ರಾಜಕೀಯ ಸುದ್ದಿ ಬಿತ್ತರಿಸುತ್ತಿದ್ದ, ಬಾಪೂ ಚಿಂತನೆ- ತೇಜಸ್ವಿಯವರ ಪರಿಸರದ ಬಗೆಗಿನ ಕಾಲಂ ಹಾಕುತ್ತಿದ್ದ, ನೀಲು - ನಿಮ್ಮಿಯಂತಹ ಊಹಾಪೋಹ ವ್ಯಕ್ತಿಗಳನ್ನ ಸೃಷ್ಟಿಸಿದ್ದ, ಜಾಹೀರಾತೇ ತೆಗೆದುಕೊಳ್ಳದೆ ಪತ್ರಿಕೆಯನ್ನು ನಡೆಸಿದ, ಲಂಕೇಶ್ ಹಾಗೂ ಅವರ ಪತ್ರಿಕೆಯ ಬಗೆಗಿನ ಚಿತ್ರಗಳು ನನ್ನ ಮನದಲ್ಲಿ ಬರುತ್ತಿದೆ. ಬಹುಶಃ ಅವರ ಬಗ್ಗೆ ಮತ್ತೊಂದು ಲೇಖನವನ್ನೇ ಬರೆಯಬೇಕೇನೋ....]



"ಹೈದರಾಬಾದ್ ನಾನು ಚೆನ್ನಾಗಿ ತಿಳಿದ, ಅರಿತ ಊರು. ಅದರ ಜೀವಂತಿಕೆ, ದುಃಖ, ಸುಂದರ ಅರಮನೆಗಳು, ಬಡವರ ಝೋಪಡಿಗಳು - ಎಲ್ಲ. ಈ ಊರಿನ ತುಂಬು ಚರಿತ್ರೆಯನ್ನು ಎಷ್ಟು ಹಿಂದಿನಿಂದ ಅವಲೋಕಿಸಿದರೂ - ಊರ ಜನರಿಂದ ನಗರವನ್ನು ಬಿಡಿಸಿ ನೋಡಲು ಸಾಧ್ಯವಿಲ್ಲ. ಇಲ್ಲಿನ ರಸ್ತೆಗಳ ಮೇಲೆಲ್ಲಾ ನಾನು ಅಲೆದಾಡಿದ್ದೇನೆ. ಇಲ್ಲಿನ ಮುಖ್ಯ ಗುರುತುಗಳೂ, ಇಮಾರತುಗಳೂ ನನಗೆ ತಿಳಿದಿತ್ತು. ಮತ್ತೆ ಈಗಲೂ ನೆನಪಿದೆ.
"ಕೆಲ ವರ್ಷಗಳ ಕಾಲ ಮುಂದುವರೆದು, ಅದರ ಅಂತ್ಯಕ್ಕೆ ಕಾರಣವಾದ ಎಲ್ಲ ಮುಖ್ಯ ಸಂಘಟನೆಗಳ ಸಕ್ರಿಯ ಪಾತ್ರಧಾರಿಯೂ ನಾನಾಗಿದ್ದೆ. ಒಂದು ಸಂಸ್ಕೃತಿಯ, ಒಂದು ಜೀವನ ಕ್ರಮದ, ನಾವೆಲ್ಲರೂ ಪ್ರೀತಿಸುವ ಈ ವಿಭಿನ್ನ ಅನನ್ಯತೆಯ, ಈ ಸಂಸ್ಕಾರವಂತ ಜೀವನದೊಂದಿಗೆ ನನ್ನ ನಿಕಟ ಸಂಬಂಧವಿತ್ತು.
"ಅಕಬರ ಶಹಜಹಾನರ ದರಬಾರಿನ ಕಡೆಯ ದೃಶ್ಯಗಳನ್ನೂ, ದೊಡ್ಡ ವೃಕ್ಷದ ಕಳಿತ ಹಣ್ಣುಗಳಂತೆ ಹಬ್ಬಿದ ತಾಜಮಹಲಿನ ಕೀರ್ತಿ, ತಾನಸೇನನ ರಾಗಮಾಧುರ್ಯ - ಇಂಥವನ್ನೆಲ್ಲ ಅಂತರ್ಗತ ಮಾಡಿಕೊಂಡಿದ್ದ, ನಾನು ಹುಟ್ಟಿ ಬೆಳೆದ ಈ ನಗರಕ್ಕೆ ಅನೇಕ ವರ್ಷಗಳ ನಂತರ ಬರುತ್ತಿರುವುದು ವಿಚಿತ್ರ ಖುಷಿಯ, ಪುಳಕದ ಅನುಭವವಾಗಿದೆ. ಆದರೆ ಈಗ ಎಲ್ಲವೂ ಬದಲಾಗಿದೆ; ಮುಖ್ಯ ಗುರುತುಗಳು ಇಲ್ಲವಾಗಿವೆ, ಖಾಲಿ ಜಾಗಗಳನ್ನು ವಿವೇಚನಾರಹಿತವಾಗಿ ಕಟ್ಟಡಗಳಿಂದ ತುಂಬಿದ್ದಾರೆ. ಹೊಸ ಮಳಿಗೆಗಳು, ಚಹಾ ದುಕಾನಗಳು, ಹೋಟೆಲುಗಳು, ಅಣಬೆಗಳಂತೆ ಎದ್ದುನಿಂತಿವೆ. ಹಿಂದೆ ನಾನು ಕಂಡದ್ದಕ್ಕಿಂತ ಹೆಚ್ಚು ಕಾರುಗಳು, ಹೆಚ್ಚು ರಿಕ್ಷಾಗಳು, ಹೆಚ್ಚು ಭಿಕ್ಷುಕರೂ, ಹಚ್ಚು ಸೈಕಲ್‌ಗಳೂ ರಸ್ತೆಯನ್ನ ತುಂಬಿದ್ದಾವೆ. ಹಳೆಯ ವಾತಾವರಣ ನಷ್ಟವಾಗಿದೆ. ಜೀವನದ ಗತಿ ಬದಲಾಗಿದೆ. ಜನ ತಮ್ಮ ವೈಯಕ್ತಿಕತೆಯನ್ನೂ ನಗರ ತನ್ನ ವ್ಯಕ್ತಿತ್ವವನ್ನೂ ಕಳೆದುಕೊಂಡಿದೆ. ಎಲ್ಲೆಲ್ಲೂ ವ್ಯಾಪಾರಿ ಮನೋಭಾವ ರಾಜ್ಯವಾಳುತ್ತಿದೆ. ಚಟುವಟಿಕೆ ವಿಪರೀತವಾಗಿ ಕಂಡರೂ ಸಂತೃಪ್ತಿ ಕಾಣುತ್ತಿಲ್ಲ."


ನಿಜ. ಜಹೀರ್ ಅಹಮದ್ ನೀನು ಹೇಳಿದ್ದು ನಿಜ. ನಿನ್ನ ವಾಕ್ಯಗಳು ೧೯೫೬ರಷ್ಟು ಹಳೆಯದಾದರೂ ಚಿರಂತನ ಸತ್ಯ. ಅದು ಹೈದರಾಬಾದಿಗಷ್ಟೇ ವರ್ತಿಸುವುದಿಲ್ಲ - ಯಾವುದೇ ನಾಗರಿಕತೆಗೆ, ಯಾವುದೇ ಕಾಲದಲ್ಲಿ ವರ್ತಿಸಬಹುದಲ್ಲವೇ? ಹಾಗೆ ನೋಡಿದರೆ ನಾನು ನಿನ್ನಂತೆ ಖಾಲಿ ಜಾಗಗಳನ್ನೂ ದೊಡ್ಡ ಇಮಾರತುಗಳನ್ನೂ ಹುಡುಕಿ ಹೊರಟವನಲ್ಲ. ನಾನು ಹುಡುಕಿದ್ದು ಒಂದು ಸಣ್ಣ ರೂಮಿಟೋಪಿಯನ್ನು. ಆಗಾಗ ಹಿಂದಿ ಸಿನೇಮಾದಲ್ಲಿ ಅರೆಹುಚ್ಚು ಹಿಡಿದ ವಿದೂಷಕನ ತಲೆಯ ಮೇಲಿದ್ದ ಕುಚ್ಚು ಟೋಪಿಯನ್ನು. ಅದು ಕೆಲ ಸಿನೇಮಾಗಳಲ್ಲಿ ಛದ್ಮವೇಷ ಧರಿಸಿದ ನಾಯಕನ ತಲೆಯಮೇಲೂ ಕಾಣುತ್ತಿತ್ತು. `ಅಮರ್ ಅಕ್ಬರ್ ಆಂಥೊನಿ' ಚಿತ್ರದಲ್ಲಿ ರಿಷಿ ಕಪೂರನ ತಲೆಯ ಮೇಲೆ ಕಂಡದ್ದು ಈ ರೂಮಿ ಟೋಪಿಯನ್ನೇ. ಕುಳ್ಳನಾದ ರಿಷಿಕಪೂರನಿಗೆ, ಉದ್ದಕ್ಕೆ ತಲೆಯ ಮೇಲೆ ನಿಲ್ಲುವ ಕೆಂಪು ಬಣ್ಣದ ಈ ಕುಚ್ಚಿನ ಮಕ್ಮಲ್ ಟೋಪಿ ಹೊಂದುತ್ತದೆ. ಆದರೆ ಇದೇ ರೂಮಿ ಧರಿಸಿ `ತಯಾಬಲಿ ಪ್ಯಾರ್ ಕಾ ದುಷ್ಮನ್ ಹಾಯ್ ಹಾಯ್' ಎಂದೂ ಖೋಜಾಗಳೊಂದಿಗೆ ನರ್ತಿಸುವಾಗ ರೂಮಿಗೆ ಬಂದ ಗತಿಯ ಬಗ್ಗೆ ನಾನೂ ಚಿಂತಿತನಾದದ್ದುಂಟು. 

"ತನ್ನ ಕಾಮ್ರೇಡುಗಳಿಂದ ಸುತ್ತುವರೆಯಲ್ಪಟ್ಟಿದ್ದ ಗೋಟ್ವಾಲ್ಡ್‌ನ ಪಕ್ಕದಲ್ಲಿ ಕ್ಲೆಮೆಂಟಿಸ್ ನಿಂತಿದ್ದ. ಸುತ್ತಲೂ ಹಿಮಪಾತವಾಗುತ್ತಿದ್ದುದರಿಂದ ಹವೆ ತುಂಬಾ ತಣ್ಣಗಿತ್ತು. ಗೋಟ್ವಾಲ್ಡ್‌ನ ತಲೆ ಟೋಪಿಯಿಲ್ಲದೇ ಖಾಲಿಯಾಗಿತ್ತು. ಇದನ್ನು ಕಂಡ ವಿಶಾಲ ಹೃದಯದ ಕ್ಲೆಮೆಂಟಿಸ್, ತನ್ನ ತಲೆಯ ಮೇಲಿದ್ದ ಉಣ್ಣೆಯ ಟೋಪಿಯನ್ನ ತೆಗೆದು ಗೋಟ್ವಾಲ್ಡ್‌ನ ತಲೆಯ ಮೇಲಿರಿಸಿದನು. 

"ಕಾಮ್ರೇಡುಗಳಿಂದ ಸುತ್ತುವರೆಯಲ್ಪಟ್ಟು, ತಲೆಯ ಮೇಲೆ ಉಣ್ಣೆ ಟೋಪಿ ಧರಿಸಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದ ಗೋಟ್ವಾಲ್ಡ್‌ನ ಚಿತ್ರದ ಲಕ್ಷೋಪಲಕ್ಷ ಪ್ರತಿಗಳನ್ನು ತೆಗೆದು, ಪಾರ್ಟಿಯ ಪ್ರಚಾರ ವಿಭಾಗದವರು, ಎಲ್ಲೆಲ್ಲೂ ಹಚ್ಚಿದರು. ಕಮ್ಯುನಿಸ್ಟ್ ಚಕೋಸ್ಲವಾಕಿಯಾದ ಚರಿತ್ರೆ ಈ ಬಾಲ್ಕನಿಯ ಮೇಲೆ ಹುಟ್ಟಿತು. ಪೋಸ್ಟರುಗಳಿಂದ, ಶಾಲಾಪುಸ್ತಕಗಳಿಂದ, ಮ್ಯೂಸಿಯಂಗಳಿಂದ, ಈ ಚಿತ್ರದ ಪರಿಚಯ ಅಲ್ಲಿನ ಪ್ರತಿ ಶಿಶುವಿಗೂ ಇತ್ತು.

"ನಾಲ್ಕು ವರ್ಷಗಳ ನಂತರ 'ದ್ರೋಹ' ದ ಆರೋಪವನ್ನ ಕ್ಲೆಮೆಂಟಿಸ್ ಮೇಲೆ ಹೇರಿ, ಅವನನ್ನ ನೇಣಿಗೇರಿಸಿದರು. ಕೂಡಲೇ ಪ್ರಚಾರ ವಿಭಾಗದವರು ಚರಿತ್ರೆಯಿಂದ, ಮತ್ತು ಸಹಜವಾಗಿ ಎಲ್ಲ ಚಿತ್ರಗಳಿಂದಲೂ ಅವನನ್ನು ಅಳಿಸಿಹಾಕಿದರು. ಅಂದಿನಿಂದ ಗೋಟ್ವಾಲ್ಡ್ ಆ ಬಾಲ್ಕನಿಯ ಮೇಲೆ ಒಂಟಿಯಾಗಿ ನಿಂತಿದ್ದಾನೆ. ಒಮ್ಮೆ - ಒಂದೊಮ್ಮೆ ಕ್ಲೆಮೆಂಟಿಸ್ ನಿಂತಿದ್ದ ಜಾಗವನ್ನು ಅರಮನೆಯ ಖಾಲಿ ಗೋಡೆ ಆಕ್ರಮಿಸಿದೆ. ಕ್ಲೆಮೆಂಟಿಸ್‌ನ ಅವಶೇಷವೆಂದರೆ... ಗೋಟ್ವಾಲ್ಡ್ ತಲೆಯಮೇಲಿನ ಉಣ್ಣೆಟೋಪಿ ಮಾತ್ರ."
ಹೀಗೆ ಬರೆದದ್ದು ಮಿಲನ್ ಕುಂದೆರಾ. ಚರಿತ್ರೆಗೂ ಟೋಪಿಗೂ ನಿಕಟ ಸಂಬಂಧ ಗುರುತಿಸಲೇ ಕುಂದೆರಾ ಇದನ್ನ ಬರೆದನೆನ್ನಿಸುತ್ತದೆ. ಚರಿತ್ರೆ ಎಲ್ಲವನ್ನೂ ಅಳಿಸಿಹಾಕಿ ಬರೇ ಉಣ್ಣೆಟೋಪಿಯನ್ನು ಚೋಕೋಸ್ಲವಾಕಿಯಾದಲ್ಲಿ ಉಳಿಸಿದರೆ ಇಲ್ಲಿ ಅದೇ ಚರಿತ್ರೆ ರೂಮಿಯನ್ನ ಅಳಿಸಿಹಾಕಿಬಿಟ್ಟಿತು. ಈಗೀಗ ಸಿನೇಮಾದಲ್ಲೂ ಆ ಟೋಪಿ ಕಾಣದಾಗಿದೆ. ಛದ್ಮವೇಷ ಧರಿಸಲು ನಾಯಕ ಮುದಿ ಫಾರಸಿಯಾಗುತ್ತಾನೆ, ಸರದಾರಜಿಯಾಗುತ್ತಾನೆ, ಶ್ರೀಮಂತ ಅರಬನಾಗುತ್ತಾನೆ, ಒಮ್ಮೊಮ್ಮೆ ಅರಬನಲ್ಲದ ಮುಸಲ್ಮಾನನೂ ಆಗುತ್ತಾನೆ... ಆದರೂ ರೂಮಿ ಟೋಪಿ ಮಾತ್ರ ಧರಿಸುವುದಿಲ್ಲ.
ಸಹಜವೇ ಇದ್ದೀತು. ಒಂದಾನೊಂದು ಕಾಲುದಲ್ಲಿ ಹೈದರಾಬಾದಿನ ಮದೀನಾ ಮಾರ್ಕೆಟ್‌ನ ಸಂಪಾದನೆಯನ್ನು ಮುಸಲ್ಮಾನ ಜನಾಂಗದ ಬಡವರಿಗೆಂದೇ - ಅದೂ ಮದೀನಾದ ಬಡವರಿಗೆಂದೇ ಪ್ರತ್ಯೇಕವಾಗಿಟ್ಟು ಅರೇಬಿಯಾಕ್ಕೆ ಕಳುಹಿಸುತ್ತಿದ್ದರೆಂದು ಪ್ರತೀತಿ. ಅದೇ ಕಾರಣಕ್ಕೆ ಆ ಮಾರುಕಟ್ಟೆಗೆ `ಮದೀನಾ ಮಾರ್ಕೆಟ್' ಎಂಬ ಹೆಸರೂ ಉಂಟಾಯಿತು. ಆದರೆ ಅದು ಹಿಂದೆ - ಅರೇಬಿಯಾಕ್ಕೆ ತೈಲ ಇನ್ನೂ ಸಿಕ್ಕಿರದ, ಅರೇಬಿಯಾ ಬಡವಾಗಿದ್ದ ಕಾಲದಲ್ಲಿ. ಆಗ ಹತ್ತಿರದ ಹೈದರಾಬಾದಿನಲ್ಲಿ ಜನ ಗತ್ತಿನಿಂದ ರೂಮಿಟೋಪಿ ಧರಿಸುತ್ತಿದ್ದರು. ಈಗ ಅರೇಬಿಯಾದ ಸರದಿ - ಹೊಸದಾಗಿ ಕಂಡ ತೈಲ ನಿಕ್ಷೇಪದಿಂದ ಅರೆಬಿಯಾ ಶ್ರೀಮಂತ ನಾಡು. ಶ್ರೀಮಂತ ನಿಜಾಮನಾಳ್ವಿಕೆ ಕಳೆದುಕೊಂಡ ಹೈದರಾಬಾದು ಬಡ ಭಾರತದ ಭಾಗ. ಈಗ ಬಡ ಹೈದರಾಬಾದೀ ಹುಡುಗರು ಅರೇಬಿಯಾದಲ್ಲಿ ದುಡಿದು ಇಲ್ಲಿಗೆ ಹಣ ಕಳಿಸುವರು. ಅರೇಬಿಯಾದವರು ಋಣಭಾರದಿಂದ ಮುಕ್ತರಾಗುವರು. ರೂಮಿಯ ಪರವೆಯೇ ಇಲ್ಲದ ಅರಬ್ಬೀ ದೇಶದವರು ಸಿನೇಮಾದಲ್ಲೂ ಪ್ರಾಮುಖ್ಯತೆ ಪಡೆದಿರುವುದು ಆಶ್ಚರ್ಯವೇನೂ ಅಲ್ಲ. 
ಹಾಗೆ ನೋಡಿದರೆ ರೂಮಿ ಸಂಪೂರ್ಣವಾಗಿ ಅದೃಶ್ಯವಾಗಿದೆಯೆಂದು ಹೇಳುವುದಕ್ಕೂ ಆಗುವುದಿಲ್ಲ. ಭಾರತ ವಿಭಜನೆಯ ಕಾಲದಲ್ಲಿ ಪಾಕಿಸ್ತಾನಕ್ಕೆ ಹೋದ ನಮ್ಮ ಸೋದರರು ಅದನ್ನ ಇನ್ನೂ ಧರಿಸುವರು. ಜೊತೆಗೆ ಪಾಕಿಸ್ತಾನದಲ್ಲಿಯೇ ಬೆಳೆದವರೂ ಧರಿಸುವರು. ತುರ್ಕಿ ಮತ್ತು ತುರ್ಕಿಯ ರಾಜಧಾನಿ ಇಸ್ತಾಂಬುಲ್ ರೂಮಿಗೆ ಖ್ಯಾತಿ ಪಡೆದಿದೆ. ಅಫಘಾನಿಸ್ತಾನ, ಇರಾನ್ ಮತ್ತು ಇರಾಕ್ ದೇಶಗಳ ಹಲವು ಭಾಗಗಳಲ್ಲಿ ನಮಗೆ ರೂಮಿ ಕಾಣಸಿಗಬಹುದು. ಆದರೆ ಇಲ್ಲಿ ಹೈದರಾಬಾದಿನಲ್ಲಿ ಮಾತ್ರ ಟೋಪಿಯಿಲ್ಲದ ಮುಸಲ್ಮಾನರಿಂದ ಹಿಡಿದು, ಉಣ್ಣೆಯ ಟೋಪಿಯ, ಮಕ್ಮಲ್ ಟೋಪಿಯ, ಕಡೆಗೆ ಗಾಂಧಿ ಟೋಪಿಯ ಮುಸಲ್ಮಾನರವರೆಗೆ ಎಲ್ಲರನ್ನೂ ಕಾಣುತ್ತೇವಾದರೂ ರೂಮಿಟೋಪಿ ಧರಿಸಿದವರು ಮಾತ್ರ ವಿರಳ. ಹಿಂದಿನ ದಿನಗಳಲ್ಲಿ ಮುಸಲ್ಮಾನರನ್ನು ಪ್ರತಿನಿಧಿಸಲು ಕನ್ನಡ ನಾಟಕಗಳಲ್ಲೂ ರೂಮಿಟೋಪಿಯ ಬಳಕೆ ಆಗುತ್ತಿದ್ದುದು ನೆನಪಾಗುತ್ತದೆ. ಆದರೆ ಅದು ಹಿಂದೆ. ಈಗ ನಮ್ಮ ಸಿನೇಮಾಗಳಲ್ಲಿ ಖ್ಯಾತಿ ಗಳಿಸಿರುವ ದಿರಿಸು - ನಿಲುವಂಗಿಗೆ ಹೊಂದುವ ವಸ್ತ್ರದಿಂದ ಶಿರಮುಚ್ಚುವುದು. ರೂಮಿ ಇಲ್ಲ. ಇರಲಿ.

ರೂಮಿ ಟೋಪಿಯ ಜತೆಜತೆಗೇ ಅದನ್ನು ಹಿಂಬಾಲಿಸಿ ನಡೆದದ್ದು ಹೈದರಾಬಾದಿನ ನವಾಬಗಿರಿ. ಬದಲಾದ ಸಂದರ್ಭದ ಅನಿವರ್ಯತೆಗೆ ಇದು ಒಳಗಾಯಿತು. ಕಡೆಯ ನವಾಬನಾದ ಮೀರ್ ಉಸ್ಮಾನ್ ಅಲಿ, ಅಸಫ್ ಜಾಹಿ ಮನೆತನದ ಏಳನೆಯ ನವಾಬನು. ಅವನು ಬದುಕಿರುವಾಗ ಬಿಟ್ಟದ್ದು ನವಾಬಗಿರಿಯಾದರೆ, ಸಾವಿನಲ್ಲಿ ೫೪ ಮೊಮ್ಮಕ್ಕಳನ್ನೂ, ೯೪ ಮರಿಮಕ್ಕಳನ್ನೂ - ಅವನ ಒಡವೆ, ವಸ್ತ್ರ ಆಸ್ತಿಪಾಸ್ತಿಗಳಿಗಾಗಿ ಕಾದಾಡಲು ಬಿಟ್ಟು ಹೋದನು.
ಮೀರ್ ಉಸ್ಮಾನ್ ಅಲಿ: ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಖ್ಯಾತಿ ಗಳಿಸಿದವನು. ಅತ್ಯಂತ ಜುಗ್ಗನೆಂದೂ ಪ್ರಖ್ಯಾತನಾದವನು. ಕಮ್ಯುನಿಸ್ಟರ ಕುಮ್ಮಕ್ಕಿನೆಂದಿಗೆ ಆಯುಧಗಳನ್ನೆತ್ತಿ ಬಂಡೆದ್ದ ರೈತರನ್ನು ಕಂಡು ಕಂಗೆಟ್ಟವನು. ಭಾರತ ದೇಶದೊಂದಿಗೂ ಪಾಕಿಸ್ತಾನದೊಂದಿಗೂ ಸೇರದೇ ಸ್ವತಂತ್ರವಾಗಿಯೇ ಹೈದರಾಬಾದನ್ನು ಆಳುತ್ತೇನಂದು ಹಠ ಹಿಡಿದವನು. ಕಡೆಗೆ ಭಾರತ ದೇಶದ ಸೈನ್ಯಕ್ಕೆ ಶರಣಾಗಿ ಸಂವಿಧಾನದಡಿ ಸೇರಲು ಒಪ್ಪಿದವನು. ಕೆಲ ಕಾಲ ರಾಜಪ್ರಮುಖನೆಂದು ಅಲಂಕಾರದ ಪದವಿಯನ್ನ ಧರಿಸಿ, ಕಡೆಗೆ ಅದನ್ನೂ ತ್ಯಜಿಸಿ ಒಂಟಿತನದಲ್ಲಿ, ಹಿಂದಿನ ಎಲ್ಲ ನಿಜಾಮರನ್ನು ಸಮಾಧಿ ಮಾಡಿದ್ದ ಮಕ್ಕಾ ಮಸೀದಿ ಬಿಟ್ಟು ನಗರ ಮಧ್ಯದ ಕಿಂಗ್ ಕೋಠಿಯಲ್ಲಿ ಚಿರನಿದ್ರೆ ಮಾಡುತ್ತಿರುವವನು.
ಈ ಇಂಥ ನಿಜಾಮನು ಅನೇಕ ಬೇರೆ ಬೇರೆ ಕೆಲಸಗಳನ್ನು ಮಾಡಿದ್ದನು. ಇಂದು ಇಂಗ್ಲೀಷಿನಲ್ಲಿ ಲಭ್ಯವಿರುವ ಕುರಾನ್‌ನ ತರ್ಜುಮೆಗಳಲ್ಲಿ ಅತ್ಯಂತ ಜನಪ್ರಿಯವಾದ ಪಿಕ್ಟಾಲ್‌ರ "The meaning of glorious Koran"ನ ಭಾಷಾಂತರವೂ ಉಸ್ಮಾನ್ ಅಲಿಯ ಪ್ರಮೇಯವಿಲ್ಲದೇ ನಡೆಯಲಿಲ್ಲ - ಕಡೆಗೆ ಪಿಕ್ಟಾಲ್ ತನ್ನ ಭಾಷಾಂತರವನ್ನು ನಿಜಾಮನಿಗೇ ಅರ್ಪಿಸಿಬಿಟ್ಟ.
ಹೀಗಿದ್ದ ಉಸ್ಮಾನ್ ಅಲಿ ೧೯೧೮ರಲ್ಲಿ ನಗರ ಮಧ್ಯದಲ್ಲಿ ೨೦೦೦ ಎಕರೆಗಳ ವಿಸ್ತೀರ್ಣದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯವನ್ನು ನಿರ್ಮಿಸಿದನು. ಕೇವಲ ೨೨೫ ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಸಂಸ್ಥೆ, ಉರ್ದು ಮಾಧ್ಯಮದಲ್ಲಿ ಉನ್ನತ ಶಿಕ್ಷಣ ಕೊಡುತ್ತಿದ್ದ ಏಕೈಕ ಸಂಸ್ಥೆಯಾಗಿತ್ತು. ಇದೆಲ್ಲಾ ಹೈದರಾಬಾದು ಭಾರತದ ಸಂವಿಧಾನದಡಿ ಸೇರುವುದಕ್ಕೆ ಹಿಂದಿನ ಮಾತು. ಸ್ವಾತಂತ್ರ ಬಂದ ಮೇಲೆ ಉರ್ದು ಓದದಿರುವ ಸ್ವಾತಂತ್ರವೂ ಪ್ರಾಪ್ತವಾಯಿತಲ್ಲವೇ?
"ಹಿಸಾಟರಿಯಾಗ್ರಫಿ ಬರೆಯುವುದು ಮಸುಷ್ಯನ ಚರಿತ್ರೆಯನ್ನಲ್ಲ, ಸಮಾಜದ ಚರಿತ್ರೆಯನ್ನು. ೧೯೬೮ರಲ್ಲಿ ರಷ್ಯಾಚಕೋಸ್ಲವಾಕಿಯಾವನ್ನು ಆಕ್ರಮಿಸಿಕೊಂಡನಂತರದ ಕೆಲ ವರ್ಷಗಳಲ್ಲಿ ಜನರನ್ನು ನಿರಂತರ ಭಯದಲ್ಲಿಟ್ಟು ರಾಜ್ಯಭಾರ ನಡೆಸುವುದಕ್ಕೆ ನಾಂದಿಯೆಂಬಂತೆ -- ಒಂದು ಯೋಜಿತ ಕಾರ್ಯಕ್ರಮದಡಿ, ಅಲ್ಲಿನ ಎಲ್ಲ ನಾಯಿಗಳನ್ನೂ ಸಾಮೂಹಿಕವಾಗಿ ಮುಗಸಿಬಿಡುವ ಕಾರ್ಯಕ್ರಮ ನಡೆಯಿತು. ಇದು ಚರಿತ್ರಕಾರರಿಗೆ ಮುಖ್ಯವಲ್ಲದ - ಅವರು ಸಂಪೂರ್ಣವಾಗಿ ಮರೆತ ಘಟನೆ. ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗೂ ಮುಖ್ಯವಲ್ಲದ ಘಟನೆ. ಆದರೆ ಮಾನವಶಾಸ್ತ್ರದಲ್ಲಿ ಇದು ಅತ್ಯಂತ ಮುಖ್ಯವಾಗಬಲ್ಲ ಸಂಗತಿ."
ಮತ್ತೆ ಮಿಲನ್ ಕುಂದೆರಾ ಮತ್ತು ಚಕೋಸ್ಲವಾಕಿಯಾದ ಚರಿತ್ರೆಯ ಶರಣು ಪಡೆಯುವುದು ಅನಿವಾರ್ಯ. ಹೈದರಾಬಾದಿನ ಚರಿತ್ರೆಯ ಪುಟಗಳನ್ನು ತಿರುವಿಹಾಕಿದರೆ, ವಿಲಾಸಜೀವನದ ಪ್ರಖ್ಯಾತಿ ಎದ್ದು ಕಾಣುತ್ತದೆ. ಆದರೆ, ಸಂಸ್ಕೃತಿ ಅದಕ್ಕಿಂತ ಕಡಿಮೆ ಖ್ಯಾತಿ ಪಡೆಯದ, ಕಡಿಮೆ ಮಹತ್ವದ್ದೇನೂ ಅಲ್ಲದ ವಿಷಯ.
೮೮ ಪ್ರತಿಶತ ಹಿಂದೂ ಜನರಿದ್ದ ಈ ನಾಡಿನಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಆಳ್ವಿಕೆ, ಆಮದಾದ ಧರ್ಮ, ಅದರೊಂದಿಗೇ ಹೇರಿ, ರಕ್ತಗತವಾಗಿಹೋಗಿದ್ದ ಉರ್ದು ಭಾಷೆ ಮತ್ತು ರಾಜ್ಯದಲ್ಲಿದ್ದ ವಿಚಿತ್ರ ಜಾಗೀರುದಾರಿ ಪದ್ಧತಿ. ವಿಪರೀತ ಐಶ್ವರ್ಯ ಹೊಂದಿದ ರಾಜವರ್ಗ, ಜತೆಜತೆಗೆ ಕಲೆ, ಸಂಸ್ಕೃತಿಗಳ ಬೀಡೂ ಆಗಿತ್ತು.
ಈ ಜಾಗೀರುದಾರೀ ಪದ್ಧತಿ ಯಾವ ದಾರಿಯಲ್ಲಿ ಬಂತು? ಅಲ್ಪ ಕಾಣಿಕೆಗೆ ಸಾವಿರಾರು ಎಕರೆಗಳ ಜಾಗೀರು ಸಿಗುತ್ತಿದ್ದುದು ಖರೆ. ಭೂಮಿ ಸ್ವಂತದ್ದಾದರೂ, ಮರಗಳಲ್ಲಿ ಬೆಳೆವ ಫಲ ಪಡೆಯುತ್ತಿದ್ದ ಹಣ್ಣುಗಳು ನಿಜಾಮನದೆಂದು ವಾದಿಸಿ, ಫಲ ಪಡೆಯುತ್ತಿದ್ದ ಜಾಗೀರುದಾರರ ಕಥೆಗಳೂ ಅನೇಕ ಪ್ರಚಲಿತವಾಗಿವೆ. ಶೋಷಣೆಯೂ ಜೀವನದ ಒಂದು ಭಾಗವಾಗಿ ಶತಮಾನಕ್ಕಿಂತಲೂ ಹೆಚ್ಚಿನ ಕಾಲದಿಂದ ತಾಂಡವವಾಡುತ್ತಿತ್ತು.
ಶತಮಾನಗಳು ನಡೆದುಬಂದ ಇತಿಹಾಸದ ಪದ್ಧತಿಯನ್ನು ಬದಲಿಸಲು ಎಷ್ಟು ದಿನ ಬೇಕಾಗಬಹುದು? ರೂಮಿಟೋಪಿಯ ಕುಚ್ಚು ಕತ್ತರಿಸಲು ಬೇರೇನೂ ಬೇಕಿಲ್ಲ - ಒಂದು ಕತ್ತರಿಯಷ್ಟೇ ಸಾಕು - ಹೆಚ್ಚು ಸಮಯವೂ ಬೇಕಿಲ್ಲ, ಎಂಬುದನ್ನ ಹೈದರಾಬಾದ್ ನಮಗೆ ಕಲಿಸಿತು.
೧೯೪೮ರ ವೇಳೆಗೆ ಒಂದೆಡೆ ರೈತಾಂಗ ಶಸ್ತ್ರಾಸ್ತ್ರ ಹೊತ್ತ ಬಂಡೆದ್ದರು. ಮತ್ತೊಂದೆಡೆ ಸರದಾರ್ ಪಟೇಲರ ಆದೇಶಾನುಸಾರವಾಗಿ ಭಾರತದೇಶದ ಪಡೆಗಳು (ಆಗಿನ್ನೂ ಭಾರತಕ್ಕೆ ಸೇರಿರದ) ಹೈದರಾಬಾದನ್ನು ಆಕ್ರಮಿಸಿದವು. (ಚರಿತ್ರೆಯ ಪುಸ್ತಕಗಳು ಈ ಸೈನಿಕ ಕಾರ್ಯಾಚರಣೆಯನ್ನು Police Action ಎಂದು ಕರೆದರೂ, Operation Polo ಎಂಬುದು ಸೈನ್ಯದವರು ಇದಕ್ಕೆ ಇತ್ತಿದ್ದ ಹೆಸರು). ಭಾರತದ ಪ್ರಭುತ್ವ ಏರ್ಪಾಟಾದ ನಂತರದ ಕೆಲ ದಿನಗಳಲ್ಲೇ - ೧೯೪೯ ರಲ್ಲಿ - ಜಹಗೀರುದಾರಿ ಪದ್ಧತಿ ಕಾನೂನು ಪುಸ್ತಕಗಳ ಪ್ರಕಾರ ರದ್ದಾಯಿತು. ಅದರೊಂದಿಗೇ ರೂಮಿಟೋಪಿಗಳೂ ಕಾಣೆಯಾಗುತ್ತಾ ಬಂದುವು. ಆದರೆ ರೂಮಿಟೋಪಿಗಳು ಪ್ರತಿನಿಧಿಸಿದ್ದು ಜರಗೀರುದಾರಿ ಪದ್ಧತಿಯನ್ನೇ ಅಥವಾ ಅದಕ್ಕಿಂತ ಮಿಗಿಲಾದ ಮುಖ್ಯ ಸಂಗತಿಯನ್ನೇ? ಈ ಪ್ರಶ್ನೆಯನ್ನ ನಾವೆಲ್ಲರೂ ಕೇಳಬೇಕು.
ಈ ಎಲ್ಲ ನಡೆದಾಗ ಜನರಿಗೇನಾಯಿತು? ಇಲ್ಲಿನ ಸಮಾಜ ಹೇಗೆ ಇದಕ್ಕೆ ಒಗ್ಗಿಕೊಂಡಿತು ಅಥವಾ ಒಗ್ಗಲಿಲ್ಲ? ಇಲ್ಲಿದ್ದ ಮುಸಲ್ಮಾನರಿಗನೇಕರಿಗೆ ಪಾಕಿಸ್ತಾನಕ್ಕೆ ಹೋಗಿ ಅಲ್ಲೇ ಖಾಯಂ ಆಗಿ ನೆಲೆಸುವ ಅವಕಾಶ ಒದಗಿಬಂದಾಗ ಹೋದವರು ಯಾರು? ರಜಾಕಾರರ ನಾಯಕ ಕಾಸಿಂ ರಿಜ್ವಿಯಂತಹವರು ಅಂಜಿಕೆಯಿಂದ ಪಲಾಯನ ಮಾಡಿದರೇ? ಮಧ್ಯಮವರ್ಗ, ವ್ಯಾಪಾರೀ ವರ್ಗದವರು, ಬುದ್ಧಿಜೀವಿಗಳು, ವಕೀಲರು, ಕವಿಗಳು, ಕಾರಕೂನರು.... ವಲಸೆ ಹೋದವರು, ಹೋಗಲೆತ್ನಿಸಿದವರು, ಹೋಗಲಿಚ್ಛಿಸಿ ಹೋಗಲಾಗದವರು, ಹೋಗದೇ ಉಳಿದವರು..ಯಾರು? ಅಸಫ್‌ಜಾಹಿ ಕಾನೂನು ಪದ್ಧತಿಯಲ್ಲಿ ಪರಿಣಿತರಾದ ವಕೀಲರು ಏಕಾ‌ಏಕಿ ನಿರುದ್ಯೋಗಿಗಳಾದರು. ಬದಲಾವಣೆಯೆಂದರೆ ಬದಲಾವಣೆ - ನಿಜಾಮನ ಖಾಸಗೀ ಸೈನ್ಯದಲ್ಲಿದ್ದವರ ನೌಕರಿ ಏನಾಯಿತು? ಹಿಂದೂ ಮುಸ್ಲಿಂ ಎಂಬ ಭೇದವಿಲ್ಲದೇ, ಜೀವನ ಹೊರೆಯಲೆಂದೇ ಉರ್ದು ಭಾಷೆ ಕಲಿತಿದ್ದವರು - ಬೀದಿಗಾದರೇ? ಈ ಕಾಲದಲ್ಲಿ ರಿಕ್ಷಾ ಚಾಲಕರ (ಸೈಕಲ್ ರಿಕ್ಷಾ) ಸಂಖ್ಯೆ ಮತ್ತು ವೇಶ್ಯೆಯರ ಸಂಖ್ಯೆ ಬೆಳೆದು ನಿಂತಿತೆಂದು ಪ್ರತೀತಿ.


ಅವರು 
ಅವನ ಅನೇಕ ಹೆಂಡಂದಿರಿದ್ದರಲ್ಲ
ಅವರೇನಾದರು? 
ಅವರೆ? ಕೆಲವರು ಅವರವರ ಹುಟ್ಟೂರಿಗೆ
ಹೊರಟು ಹೋದರು. ಇನ್ನು ಯಾರನ್ನೋ
ಆಶ್ರಯಿಸಿದರು. ಕೆಲವರು ಚಾರ್‌ಮಿನಾರಿನ
ಸಮೀಪ ಮಾಲೆಗಳನ್ನು ಕಟ್ಟಿ ಮಾರತೊಡಗಿದರು.
ಹಳೇನಗರದ ಧೂಳು ಎಲ್ಲಾ ಹೂವುಗಳ ಮೇಲೂ
ಕುಳಿತಿದೆ.
ಕೆಲವರು ನರ್ತಕಿಯರಾದರು. ಸ್ಪರ್ಶಕ್ಕೆ ನಾಚಿದರು.
ನಿಜಕ್ಕೂ ಪ್ರೇಮಿಸಿದರು. ಬೇರೆ ರೀತಿಯಿಂದ
ಬೇರೆ ಜನರೆದುರು ಹಾಡಿದರು. ಆಗಿಂದಾಗ್ಗೆ ಸತ್ತ
ಇವರ ಗೋರಿಯನ್ನು ಯಾರೂ ಕಟ್ಟಿಸಲಿಲ್ಲ.
ಇನ್ನು ಕೆಲವರು ಕೊನೆಯಿಲ್ಲದ ಗಲ್ಲಿಗಳಾದರು
ನೀವು ಮೆಟ್ಟುವ, ನೀವು ಹುಡುಕುವ.'
ತಿರುಮಲೇಶ್ ಕೇಳಿದ ಪ್ರಶ್ನೆಯನ್ನೇ ನಾನೂ ಕೇಳುತ್ತಿದ್ದೇನೆ. ಕಣ್ಣಿಗೆ ಕಾಣುವುದನ್ನೂ ಮೀರಿ ನಿಂತ ಅರ್ಥ ಈ ಎಲ್ಲಕ್ಕೂ ಇವೆ ಎನ್ನಿಸಿರುವುದರಿಂದ.
ಈ ಎಲ್ಲವೂ ನಡೆಯುತ್ತಿದ್ದಾಗ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಯಾರೂ ಕಾಣದಂತಹ ನಿಧಾನ ಬದಲಾವಣೆ ಆಗುತ್ತಿತ್ತು. ಎಲ್ಲಿಯ ಉರ್ದು? ಉರ್ದು ಮಾಧ್ಯಮದಲ್ಲಿ ಶಿಕ್ಷಣ ಅಂತಿರಲಿ - ಭಾಷಗೇ ಕೊಡಲಿಯಿಟ್ಟ ಪರಿಸ್ಥಿತಿಉದ್ಭವವಾದಂತಾಯಿತು. ೧೯೫೪ರಲ್ಲಿ ದರ್-ಆಲ್-ತರ್ಜುಮಾಗೆ ಬೆಂಕಿ ಬಿದ್ದದ್ದು ಚರಿತ್ರೆಗೆ ತಿಳಿದ ವಿಷಯ. ವಿಶ್ವದ ಎಲ್ಲ ಪ್ರಮುಖ ಪುಸ್ತಕಗಳನ್ನು ಉರ್ದುವಿಗೆ ತರ್ಜುಮೆ ಮಾಡಬೇಕೆಂದು ಹುಟ್ಟುಹಾಕಿದ್ದ ಈ ವಿಭಾಗದಲ್ಲಿ ಬೇರೆ ಭಾಷೆಗಳದ್ದಲ್ಲದೇ ಅಮೂಲ್ಯ ಅರಬ್ಬೀ ಗ್ರಂಥಗಳೂ ಇದ್ದುವೆಂದು ಪ್ರತೀತಿ. ಇಂಥ ದರ್-ಆಲ್-ತರ್ಜುಮಾಗೆ ಬಿದ್ದ ಬೆಂಕಿ ಸುಟ್ಟದ್ದು ಬರೇ ಪುಸ್ತಕಗಳನ್ನಷ್ಟೇ ಅಲ್ಲ.

ಈ ಎಲ್ಲ ಬದಲಾವಣೆಗಳೂ ಹೈದರಾಬಾದಿನ ಜನರನ್ನ ಕಂಗೆಡಿಸಿತು. ಭಾಷಾವಾರು ಪ್ರಾಂತ್ಯ ವಿಭಜನೆಯಲ್ಲಿ ಹಳೆಯ `ಹೈದರಾಬಾದ್ ಸ್ಟೇಟ್'ಗೆ ಸೇರಿದ ಅನೇಕ ಸ್ಥಳಗಳು ಕರ್ನಾಟಕ, ಮಹಾರಾಷ್ಟ್ರಗಳ ನಡುವೆ ಹಂಚಿಹೊದುವು. ಹೈದರಾಬಾದ್ ನಗರ ಮತ್ತು ಸುತ್ತಮುತ್ತಲ ಇತರ ಪ್ರಾಂತಗಳು ವಿಶಾಲಾಂಧ್ರದಲ್ಲಿ ಸೇರಿದುವು. ಉರ್ದು ಭಾಷಯಲ್ಲಿಯೇ ಕಲಿತ ವೀರೇಂದ್ರ ಪಾಟಿಲರೂ ಕರ್ನಾಟಕದ ರಾಜಕೀಯಕ್ಕೆ ಹೈದರಾಬಾದ್ ಸ್ಟೇಟ್‌ನ ಈ ಪಾಲಿನಿಂದಲೇ ಬಂದವರು. ಆನಂತರವೇ ಕನ್ನಡ ಕಲಿತರು. ಹಾಗೆಯೇ ಆಂಧ್ರದ ಚೆನ್ನಾರೆಡ್ಡಿಯೂ ವೈದ್ಯಕೀಯ ಶಿಕ್ಷಣ ಪಡೆದದ್ದು ಉರ್ದು ಮಾಧ್ಯಮದಲ್ಲಿ.
ಭಾಷಾವಾರು ವಿಭಜನೆಯಲ್ಲಿ ಪ್ರತೀ ರಾಜ್ಯಕ್ಕೂ ತನ್ನದೇ ರಾಜ್ಯಭಾಷೆ ದಕ್ಕಿತು. ಕರ್ನಾಟಕಕ್ಕೆ ಕನ್ನಡ, ಆಂಧ್ರಪ್ರದೇಶಕ್ಕೆ ತೆಲುಗು, ಮಹಾರಾಷ್ಟಕ್ಕೆ ಮರಾಠಿ. ಆದರೆ ಇಲ್ಲಿ ನೆಲೆನಿಂತ ಉರ್ದು ಹೋದದ್ದೆಲ್ಲಿಗೆ? 
"ರಾಜ್ಯಕ್ಕೆ ಒಂದು ಭಾಷೆ ಸಿಕ್ಕಿದ್ದೇನೋ ನಿಜ... ಆದರೆ ಸಂವಿಧಾನ ಗುರುತಿಸುವ ಪ್ರತೀ ಭಾಷೆಗೂ ಒಂದು ರಾಜ್ಯ ದೊರೆಯಿತೇ?"ಎಂದು ರಶೀದುದ್ದೀನ್ ಖಾನ್ ಪ್ರಶ್ನಿಸುತ್ತಾರೆ. ಡೋಗ್ರಿ ಭಾಷೆಯೇ ಪ್ರಮುಖವಾದಿ ಜಮ್ಮು ಕಾಶ್ಮೀರದಲ್ಲಿ ಉರ್ದು ರಾಜ್ಯ ಭಾಷೆ. ಒಂದು ಕಾಲದಲ್ಲಿ ಪಂಜಾಬಿನಲ್ಲಿ ಉರ್ದುವಿನ ಬಳಕೆ ಹೆಚ್ಚಾಗಿ ಇರುತ್ತಿತ್ತು. ಲಖನೋ ಅಲಹಾಬಾದ್‌ಗಳು ಉರ್ದು ಸಂಸ್ಕೃತಿಯ ಕೇಂದ್ರಗಳಾಗಿದ್ದುವು. ಆದರೆ ಇಂದು? ಲಖನೋ ಒಂದೆಡೆಗಿರಲಿ, ಉರ್ದುವನ್ನು ಪೋಷಿಸಿದ ಹೈದರಾಬಾದಿನ ಸ್ಥಾನ ಏನು?
೧೯೪೮: ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಉರ್ದು ಮಾಧ್ಯಮ ಇಲ್ಲವಾಯಿತು.
೧೯೫೬: ಹೈದರಾಬಾದ್ ಸ್ಟೇಟ್ ಇಲ್ಲವಾಯಿತು.
"ಈ ಸಮಯದಲ್ಲಿ ಸಂಸ್ಕೃತಿ ಸಾಹಿತ್ಯದ ಹರಿಕಾರರನೇಕರು ಪಾಕಿಸ್ತಾನಕ್ಕೆ ವಲಸೆ ಹೋದರು. ಇಲ್ಲಿ ಬಿತ್ತಿದ ನಾಟಕರಂಗದ ಬೀಜ ಸಿಬ್ತೆ ಹಸನ್, ಇಬ್ರಹೀಂ ಜಲೀಸ್ ಮತ್ತು ಖ್ವಾಜಾ ಮೊಯಿನುದ್ದೀನರ ಮೂಲಕ ಪಾಕಿಸ್ತಾನದಲ್ಲಿ ಬೆಳೆದು ಫಲ ನೀಡಲಿತ್ತು." ಎಂದು ಅಕಬರ್ ಅಹಮದ್ ಹೇಳಿದ್ದು ನಿಜವೇ ಇರಬೇಕು. ಪಾಕಿಸ್ತಾನದಲ್ಲಿ ಇಂದಿಗೂ ರೂಮಿ ಟೋಪಿ ಧರಿಸುವವರನ್ನ ಕಾಣಬಹುದಂತೆ.
"ಸರಕಾರ" ಎಂಬುದು ಒಂದು ವ್ಯಕ್ತಿಯೂ ಅಲ್ಲ, ಒಂದು ಸಮಾಜವೂ ಅಲ್ಲ. ಯಾರಿಗೂ ಜವಾಬುದಾರಿ ಹೊರಿಸಲಾಗದ, ಯಾರನ್ನೂ ಬೊಟ್ಟೆತ್ತಿ ತೋರಿಸಲಾಗದ ಒಂದು ವಿಚಿತ್ರ ವ್ಯವಸ್ಥೆ. ಸರಕಾರದ ಮಟ್ಟಿಗೆ ಭಾಷೆ, ಸಂಸ್ಕೃತಿ ಎಂದರೆ ಅದು ತನ್ನ ಸಂಸ್ಕೃತಿ ಇಲಾಖೆಯ ಮೂಲಕ ನಡೆಸುವ ಅಪನಾ ಉತ್ಸವ, ಭಾರತ ಉತ್ಸವಗಳು ಮಾತ್ರ. ದರ್-ಅಲ್-ತರ್ಜುಮಾಗೆ ಬಿದ್ದ ಬೆಂಕಿಯಾಗಲೀ, ವಿಶ್ವವಿದ್ಯಾಲಯದಲ್ಲಿ ಹೇಳಹೆಸರಿಲ್ಲದೇ ರೂಮಿಟೋಪಿಯಾದ ಉರ್ದು ಭಾಷೆಯಾಗಲೀ ಚಿಂತೆಯ ವಿಷಯವೇ ಆಗುವುದಿಲ್ಲ. ಬದಲಿಗೆ ಫೆಸ್ಟಿವಲ್ ಆಫ್ ಫ್ರಾನ್ಸ್ ಮೂಲಕ ಹೊಸ ಸಂಸ್ಕೃತಿಗಳ ಆಘ್ರಾಣಯತ್ನ ನಡೆಯುತ್ತಿರುತ್ತದೆ.
ಇಲ್ಲಿ ಹೈದರಾಬಾದ್ ಪ್ರಾಂತದಲ್ಲಿ `ರೋಜಿರೋಟಿ'ಗಾಗಿ ಭಾಷೆ ಕಲಿತ ಜನ ಹೊಸ ರಾಜ್ಯಭಾಷಯೆ ಪ್ರಹಾರದಡಿ ಸಿಲುಕಿ ಕ್ರಮಕ್ರಮೇಣ ಬದುಕಿನ ಮುಖ್ಯವಾಹಿನಿಯಿಂದ ದೂರವಾಗಿ ಈ ಉರಿನಲ್ಲೇ ಒಂದು ದ್ವೀಪವಾಗುತ್ತಾರೆ.
ಹೌದು, ಸಂಸ್ಕೃತಿಯ ಕೇಂದ್ರವಾಗಿದ್ದ ಉಸ್ಮಾನಿಯಾ ಈಗೆಲ್ಲಿ?
`ನಿಮ್ಮ ಹೊಟೇಲಿನಲ್ಲಿ ರುಬ್ಬುಗುಂಡೆಲ್ಲಿ?'
`ಇಲ್ಲ ಇಲ್ಲಿ ಎಲ್ಲಾ ಎಲೆಕ್ಟ್ರಿಕ್ಕೇ!'
`ನಾನು ಎಂ.ಎ. ಎಲ್.ಎಲ್.ಬಿ, ಎಷ್ಟೇ ಉಸ್ಮಾನಿಯಾ ವಿಶ್ವವಿದ್ಯಾಲಯದ ಪದವೀಧರನಾದರೂ ಪಾತ್ರೆ ತೊಳೆಯುವುದು ಚೆನ್ನಿರುವುದಿಲ್ಲವೇನೋ..'
ಹೊಟೇಲಿನ ಬಿಲ್‌ಗೆ ಹಣ ಸಾಲದ ಯಂಡಮೂರಿ ವೀರೇಂದ್ರನಾಥರ ಕಥಾನಾಯಕ ಆಡುವ ಮಾತುಗಳಿವು. 
ಹಿಂದೆ ಕೇಳಿದ ಪ್ರಶ್ನೆಯನ್ನೇ ಬೇರೆ ಧ್ವನಿಯಲ್ಲಿ, ಬೇರೆ ಅರ್ಥದಲ್ಲಿ ಕೇಳಬೇಕನ್ನಿಸುತ್ತದೆ -


ಸಂಸ್ಕೃತಿಯ ಕೇಂದ್ರವಾಗಿದ್ದ ಉಸ್ಮಾನಿಯಾ ಈಗೆಲ್ಲಿ?



ಒಂದು ಭಾಷೆಯ ನಿಧನಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂಬುದಕ್ಕೆ ಹೈದರಾಬಾದಿನ ಚರಿತ್ರೆ ಒಂದು ಉದಾಹರಣೆಯಾಗಿ ನಿಲ್ಲುವುದು. ಶತಮಾನದ ಚರಿತ್ರೆ ಬದಿಗೊತ್ತಿ, ಇಲ್ಲಿ ಉರ್ದುವಿನಿಂದಲೇ ಜೀವಿಸುತ್ತಿದ್ದ ಅನೇಕರಿದ್ದರು (ಹಾಗೂ ಆ ಪರಂಪರೆಗೆ ಸೇರಿದವರು ಇನ್ನೂ ಸಾಕಷ್ಟು ಮಂದಿ ಇದ್ದಾರೆ). ಕನಿಷ್ಠ ದ್ವಿತೀಯ ರಾಜ್ಯಭಾಷೆಯ ಸ್ಥಾನವನ್ನಾದರೂ ಉರ್ದುವಿಗೆ ಕೊಡಿರೆಂದು ಜನ ಕೇಳಿದ್ದರು. ಜಾಕಿರ್ ಹುಸೇನರು ೨೦ ಲಕ್ಷ ಜನರ ಹಸ್ತಾಕ್ಷರವಿದ್ದ ಮನವಿಪತ್ರವನ್ನು ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದರಿಗೆ ನೀಡಿದ್ದೂ ಉಂಟು. ನಂತರ ಜಾಕಿರ್ ಹುಸೇನರೇ ಮನವಿಪತ್ರ ಸ್ವೀಕರಿಸುವ ಆ ಹುದ್ದೆಯನ್ನ ಅಲಂಕರಿಸಿದ್ದೂ ಉಂಟು. ಉರ್ದುವಿನಲ್ಲೇ ವಿದ್ಯಾಭ್ಯಾಸ ಮಾಡಿದ್ದ ಪಿ.ವಿ.ನರಸಿಂಹಾ ರಾವು, ಚೆನ್ನಾರೆಡ್ಡಿಗಳಂತಹ ಮುಖ್ಯಮಂತ್ರಿಗಳೂ ಈ ರಾಜ್ಯಕ್ಕೆ ಆಗಿ ಹೋದರು. ಏನೊಂದೂ ಪ್ರಯೋಜನ ನೀಡಲಿಲ್ಲ.

ಸಂಸ್ಕೃತಿಯೊಂದರ ಮುಖ್ಯ ಕೇಂದ್ರವಾಗಬಹುದಾಗಿದ್ದ - ಸಾಹಿತ್ಯ ನಿರ್ಮಾಣದಲ್ಲಿ ಪ್ರಮುಖಪಾತ್ರ ವಹಿಸಬಹುದಾಗಿದ್ದ - ಲಖನೋವಿನಂತಹ ನಜಾಕತ್ ನಗರಕ್ಕೆ ಸರಿಸಮನಾಗಿ, ಸವಾಲಾಗಿ ನಿಲ್ಲಬಹುದಿದ್ದ ಅವಕಾಶ ಈ ಅಲ್ಲೋಲಕಲ್ಲೋಲದಿಂದ ತಪ್ಪಿಹೋಯಿತೇ? ಹೈದರಾಬಾದಿನಲ್ಲಿ ಪ್ರಚಲಿತವಿರುವ ಉರ್ದು, ಹಿಂದಿ, ತೆಲುಗು ಮಿಶ್ರಿತ ಭಾಷೆ ಏನು ಸೂಚಿಸುತ್ತದೆ? ರಾಜಸ್ತಾನಿ ಸಮಾಜದವರು, ಮಾರವಾಡಿ ಸಂಘದವರು ನಡೆಸುವ ಅದ್ಧೂರಿಯ "ಮುಷಾಯಿರಾ"ಕ್ಕೆ ನೂರಾರು ರೂಪಾಯಿನ ಟಿಕೇಟು ಖರೀದಿಸಿ, ಕವಿಗಳು ಪ್ರಾಸಬದ್ಧವಾಗಿ ಹೇಳುವ ಜೋಕುಗಳನ್ನು ಖುಷಿಯಿಂದ ಆಲಿಸುವ ಜನ ಯಾರು? ಈ ಸಾವಿರಾರು ರೂಪಾಯಿ ಖರ್ಚು ಮಾಡಿ ಏರ್ಪಡಿಸಿರುವ 'ಮುಷಾಯಿರಾ'ದಲ್ಲಿ ಭಾಗವಿಸಿರುವ ಕವಿಗಳಲ್ಲಿ ಹೈದರಾಬಾದ್ ಮೂಲದವರೆಷ್ಟು?
ದರ್-ಅಲ್-ತರ್ಜುಮಾ, ಉಸ್ಮಾನಿಯಾ ವಿಶ್ವವಿದ್ಯಾಲಯ, ಉರ್ದು ಮಾಧ್ಯಮದ ಉನ್ನತ ವ್ಯಾಸಂಗ, ಏನೆಲ್ಲಾ ತಮ್ಮ ಬೇರುಗಳನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ದೊರೆತ ಸ್ವಾತಂತ್ರಕ್ಕೆ ಸಂತೋಷ ಪಡಬೇಕೇ? `ಉರ್ದುವನ್ನು ನಿಜಾಮನ ವಂಶದವರು ತೆಲುಗರ ಮೇಲೆ ಹೇರಿದ್ದರು - ಈಗ ಮತ್ತೆ ಹಿಂದಿನ ಸ್ಥಿತಿಗೇ ಹೋಗಿ, ಸಮತೋಲನ ಬಂದಿದೆ.' ಎಂದು ವಾದಿಸುವವರಿದ್ದಾರೆ. ಆದರೆ ಇದು ಇಷ್ಟು ಸರಳವಾಗಿ "ಸೇಡಿ"ನ ಮನೋಭಾವದಲ್ಲಿ ನೋಡುವ ವಿಷಯ ಎಂದೆನಿಸುವುದಿಲ್ಲ.
ಇಲ್ಲೇ ಈ ನೆಲದಲ್ಲೇ ಬೆಳೆಯಬಹುದಿದ್ದ ಇಕ್ಬಲ್ ಅಥವಾ ಗಾಲಿಬ್ ಪಾಕಿಸ್ತಾನಕ್ಕೆ ವಲಸೆ ಹೋಗಿರಬಹುದೇ? ಅಥವಾ ಇಲ್ಲೇ ಉಳಿದು, ಉರ್ದು ಪೂರ್ಣ ಕಲಿಯದೇ, ತೆಲುಗನ್ನೂ ಅಭ್ಯಾಸ ಮಾಡಲಾಗದೇ ಒಂದು ದ್ವೀಪವಾಗಿ ನಿಂತಿರಬಹುದೇ? ಒಬ್ಬಳು ಜೀಲಾನೀ ಬಾನೋ, ದಿವಂಗತ ಮುಕ್ದೂಂ ಮೊಯಿನುದ್ದೀನ್ ಮಾತ್ರವಷ್ಟೇ ಹೈದರಾಬಾದಿಗೆ ಸಾಕೇ? ಈ ಎಲ್ಲ ಪ್ರಶ್ನೆಗಳೂ ರೂಮಿಟೋಪಿಗಳಾಗಿ ತಲೆಯ ಮೇಲೆ ಕುಳಿತುಕೊಳ್ಳುತ್ತವೆ. ಉತ್ತರ ಹುಡುಕುವಷ್ಟರಲ್ಲೇ ಮಾಯವಾಗುತ್ತವೆ. ಮತ್ತೆ ವ್ಯವಸ್ಥಿತವಾಗಿ ಹಿಂದಿಯನ್ನು ವಿವಿಧ ರೀತಿಗಳಿಂದ ರಾಷ್ಟ್ರದ ಮೇಲೆ ಹೇರುತ್ತಿರುವ ಈ ಸಂದರ್ಭದಲ್ಲಿ ಇದು ಕೇವಲ ಚರಿತ್ರೆಯ ಪ್ರಶ್ನೆಯಾಗಲೀ, ಹೈದರಾಬಾದಿನ ಪ್ರಶ್ನಯಾಗಿಯಾಗಿ ಆಗಲೀ ಉಳಿಯುವುದಿಲ್ಲ.

ಈ ಎಲ್ಲದರ ನಡುವೆ ನಮ್ಮಲ್ಲಿ ಪರಕೀಯವಾಗಿ ಉಳಿದು ದ್ವೀಪ ಕಟ್ಟಿಕೊಂಡ ಜನರೂ ಜೀವಿಸುತ್ತಿದ್ದಾರೆ. ಪಾಕಿಸ್ತಾನಕ್ಕೆ ವಲಸೆ ಹೋದ ತಮ್ಮ ಅಕ್ಕ, ತಂಗಿ, ಅಣ್ಣ, ಚಾಚಾ, ಮಾಮಾಗಳಿಗಾಗಿ ಪ್ರಾರ್ಥನೆ ಮಾಡುವ ಜನ, ಅವರ ನಮಾಜಿನಲ್ಲಿ ನಮ್ಮನ್ನೂ ಸೇರಿಸುವ ಜನಾಂಗ, ಭೀತಿಯಿಂದ ಇಲ್ಲೇ ಜೀವಿಸುತ್ತಿದ್ದಾರೆ. ಹಳೆಯ ನೆನಪಿಗೆಂದು ಅವರು ಆಗಾಗ ರೂಮಿಟೋಪಿ ಧರಿಸುತ್ತಾರೆ.

ಇಲ್ಲಿನ ಮುಸಲ್ಮಾನರ ಸಮಸ್ಯೆ ದೇಶದ ಬೇರೆಡೆಯ ಅಲ್ಪಸಂಖ್ಯಾತರ ಸಮಸ್ಯಗಿಂತ ಭಿನ್ನವಾದದ್ದು. ಮುಖ್ಯವಾಹಿನಿಯಲ್ಲಿಬೆರೆತುಹೋಗಿದ್ದ ಇತರರಿಗೂ, ಕಾಸಿಂ ರಿಜ್ವಿಯ ಜತೆ ಸೇರಿ ಇಲ್ಲಿನ ಬಹುಸಂಖ್ಯಾತರ ವಿರುದ್ಧ ತೆಲಂಗಾಣಾ ರೈತ ಹೋರಾಟದಲ್ಲಿ ರಜಾಕಾರರಾಗಿ (ರಜಾಕಾರ್: ಸ್ವಯಂಸೇವಕ, ಕಡೆಗೂ ಖಡ್ಗ ಹಿಡಿದು ಹೋರಾಡುವ ಮೂಲಭೂತವಾದಿಳೆಲ್ಲರೂ ತಮ್ಮನ್ನು ಸ್ವಯಂಸೇವಕರೆಂದು ಕರೆದುಕೊಳ್ಳುವುದರಲ್ಲಿ ಏನಾದರೂ ನಿಗೂಢ ಅರ್ಥವಿರಬಹುದೋ?) ಹೋರಾಡಿದ ಈ ಜನಾಂಗಕ್ಕೂ ವ್ಯತ್ಯಾಸ ಇರುವುದು ಸಹಜ. ಇದೇ ಜನ ಭಾರತದ ಸೈನ್ಯದ ವಿರುದ್ಧವೂ ಹೋರಾಡಲೆತ್ನಿಸಿದವರು. ತಮ್ಮ ಬಂಧುಬಾಂಧವರಲ್ಲನೇಕರು ಪಾಕಿಸ್ತಾನಕ್ಕೆ ಹೋದದನ್ನು ಕಂಡು, ನಿಂತವರು. ತಮ್ಮವರೇ ಪರಕೀಯರಾಗುವುದನ್ನು ಹಾಗೂ ಇಲ್ಲಿ ತಾವೇ ಪರಕೀಯರಾಗಿ ಉಳಿಯಬೇಕಾದ ಪರಿಸ್ಥಿತಿಯ ವಿರೋಧಾಭಾಸವನ್ನ ಕಂಡ ಜನರಿವರು. ಬಹುಶಃ ಮತಕ್ಷೋಭೆಯ ಬೀಜಾಂಕುರ, ಸಂಸ್ಕೃತಿ, ಚರಿತ್ರೆಯನ್ನು ಒಂದೇ ಏಟಿಗೆ ಅಳಿಸಿಹಾಕಿದ ರೀತಿಯಲ್ಲಿ, ಅವರು ಗೋಡೆ ಬದಿಗೆ ಒತ್ತಲ್ಪಟ್ಟ ರೀತಿಯಲ್ಲಿ, ಅವರ ಪರಕೀಯಭಾವದಲ್ಲಿ ಉಂಟಾಗುತ್ತದೆ ಅನ್ನಿಸುತ್ತದೆ.

ರೂಮಿಟೋಪಿಯ ಮೇಲೆ, ಯಾವ ಕಾರಣಕ್ಕಾಗಿ, ಎತ್ತಲಿಂದ ಆಕ್ರಮಣ ಆಯಿತು ಎನ್ನುವುದು ಗೂಢ ಸಂಗತಿ. ಆದರಿಂದು ಹೈದರಾಬಾದ್ ಬದಲಾದ ಜಾಗ. ಬದಲಾದ ಸಂಸ್ಕೃತಿಯ ಪ್ರತೀಕವನ್ನು ಅಕಬರ್.ಎಸ್.ಅಹಮದ್ ಚಿತ್ರಿಸುತ್ತಾರೆ:
"ನೌಬತ್ ಪಹಾಡ್‌ನ ಮೇಲೆ, ಅದನ್ನು ಕಟ್ಟಿದವರ ಹೆಸರಿಗನುಸಾರವಾಗಿ "ಬಿರ್ಲಾ ಮಂದಿರ" ಎಂದುಕರೆಯಲ್ಪಡುವ ಈ ಮಂದಿರ ಇಡೀ ಹೈದರಾಬಾದನ್ನು ಆವರಿಸಿದೆ. ಒಂದು ಸಾವರ ಟನ್‌ಗಳ ಅಮೃತಶಿಲೆಯಿಂದ ಈ ಮಂದಿರವನ್ನು ನಿರ್ಮಿಸಿದವರು - ತಾಜಮಹಲ್ ನಿರ್ಮಿಸಿದರೆಂದು ಹೇಳಲ್ಪಡುವ ರಾಜಾಸ್ತಾನದ ಕುಶಲಕರ್ಮಿಗಳು. ರಾತ್ರೆಯ ವೇಳೆ ಹಾಸುವ ತೀಕ್ಷ್ಣಬೆಳಕು ಅದರಮೇಲೆ ಚೆಲ್ಲಿ ಅದು ಅನೇಕ ಮೈಲುಗಳ ದೂರಕ್ಕೂ ಕಾಣುತ್ತದೆ. ರಾತ್ರೆಯ ಕತ್ತಲಲ್ಲಿ ಪ್ಯಾರಿಸ್‌ನ 'sacre coeur'ನಂತೆ ಕಾಣುವ ಈಇಮಾರತು ನಗರವನ್ನೇ ಆಳುತ್ತದೆ. ಇದಕ್ಕೆ ಭಿನ್ನವಾಗಿ ನಗರದ ಹೃದಯವಾಗಿದ್ದ ಚಾರ್‌ಮಿನಾರ್ ಜೀವಂತ ಪ್ರತಿಮೆಯಾಗಿರದೇ, ಗಾಲಾಟೆ, ವಾಹನಗಳು, ಜನಜಂಗುಳಿಯ ನಡುವೆ ಪ್ರವಾಸಿಗಳ ಆಸಕ್ತಿಯಾಗಿ, ಪುರಾತತ್ವ ಇಲಾಖೆಗೆ ಸಂಸ್ಕೃತಿಯ ಪ್ರತೀಕವಾಗಿ, ಅನಾಥವಾಗಿ ನಿಂತಿದೆ."

ಆಗಸ್ಟ್, ೧೯೯೦


Tuesday, January 1, 2013

ಮಾವೋತೊ ನಕ್ಸಲ್


[ಈ ಲೇಖನವನ್ನು ನಾನು ಬರೆದದ್ದು ೧೯೯೦ರಲ್ಲಿಆಗ ಲಂಕೇಶ್ ಪತ್ರಿಕೆಯಲ್ಲಿ ಒಂದು ಪುಟ್ಟ ಟಿಪ್ಪಣಿ ಹಾಕಿ ಅವರು ಪ್ರಕಟಿಸಿದ್ದರು ಟಿಪ್ಪಣಿಯಲ್ಲಿ ನಕ್ಸಲ್ಗಳನ್ನುಸಮೀಪದಿಂದ ಕಂಡ ಶ್ರೀರಾಮ್ ಅವರ ಲೇಖನ ಎಂದು ಬರೆಯಲಾಗಿತ್ತುಅದು ಸತ್ಯಕ್ಕೆ ದೂರವಾದ ಮಾತುನಾನು ನಕ್ಸಲ್ಗಳಬಗ್ಗೆ ಓದಿ ಅವರ ಚಟುವಟಿಕೆಗಳ ಬಗ್ಗೆಕುತೂಹಲಿಯಾಗಿದ್ದೆನಾಗಲೀಅವರನ್ನು ಸಮೀಪದಿಂದ ಕಂಡವನಲ್ಲವರವರರಾವು ಅವರನ್ನು ಒಮ್ಮೆ ಭೇಟಿಯಾದದ್ದುಮಾತ್ ನೆನಪಿದೆಅದೂಬೆಂಗಳೂರಿನಲ್ಲಿಹತ್ತುನಿಮಿಷಗಳ ಮಟ್ಟಿಗೆಹೀಗಾಗಿ  ಲೇಖನ ನನ್ನ ಓದಿನ ಮತ್ತು ಜನರೊಂದಿಗಿನ ಮಾತುಕತೆಯ ಫಲಿತವಾಗಿ ಬರೆದದ್ದು ಅಷ್ಟೇ..  ಹದಿನೆಂಟುವರ್ಷಗಳಲ್ಲಿ ಹೆಚ್ಚುಬದಲಾಗಿದೆಯೇಗೊತ್ತಿಲ್ಲ]



ಆರು ವರ್ಷಗಳ ಹಿಂದೆನೌಕರಿಗೆಂದು ಹೈದರಾಬಾದ್ ಹೊಕ್ಕಾಗಮೊದಲ ಬಾರಿಗೆ ಕಾಳಜಿಪೂರ್ವಕವಾಗಿ ನಕ್ಸಲೈಟ್ ಎಂಬ ಪದಬಳಕೆಯಾಗುವುದನ್ನು ಕಂಡೆ.

ಅದಕ್ಕೂ ಮೊದಲು -
ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾದಲ್ಲಿ ಓದಿದ್ದ - ಸಿಲಿಗುಡಿಯ ಬಳಿಯ ನಕ್ಸಲ್ಬರಿ ಗ್ರಾಮದ ರೈತಾಂಗ ಬಂಡೆದ್ದ ಕಥೆ, ಮಿಥುನ್ಚಕ್ರಬೋರ್ತಿ ಎಂಬಂಥ ಹಿಂದಿ ಚಿತ್ರನಟ ಹಿಂದೆ ನಕ್ಸಲೈಟ್ ಆಗಿದ್ದ ಎಂಬ ವದಂತಿ ಎಲ್ಲವೂ೧೮೯೫ರಲ್ಲಿ ಬಂಡೆದ್ದು ದಂತಕಥೆಯಾದ ಬಿರ್ಸಾ ಮುಂಡಾನ ಕಥೆಯಷ್ಟೇಅಥವಾ ತೆಲಂಗಾಣಾ ರೈತಾಂಗ ಹೋರಾಟದಲ್ಲಿ ಅಮರನಾದ ದೊಡ್ಡಿ ಕೊಮುರಯ್ಯನಕಥೆಯಷ್ಟೇ ಪರಕೀಯವಾಗಿ ನನ್ನಂತರಂಗವನ್ನ ಹೊಕ್ಕಿತ್ತು.

ಆಗಅದೇ ಕಾಲದಲ್ಲಿ ನಿಜಾಮಾಬಾದ್ ಜಿಲ್ಲೆಯ ಜಂಗಂಪಲ್ಲಿ ಗ್ರಾಮದಲ್ಲಿ ನಕ್ಸಲ್ ಚಟುವಟಿಕೆಯ ತರಂಗಗಳೂ ನಮ್ಮನ್ನ ತಾಗಿದ್ದುವು.ಪಕ್ಕದೂರಿನ ದೊರ ನಕ್ಸಲ್ಗಳಿಂದ ದೋಚಲ್ಪಟ್ಟಿದ್ದಹೀಗಾದರೂಅಪಹರಣದ ಸುದ್ದಿಯಾಗಲೀತೊಟ್ಟು ರಕ್ತ ಚೆಲ್ಲಿದ ಖಬರಾಗಲೀಕೇಳಿಬಂದಿರಲಿಲ್ಲ.

ನಕ್ಸಲೈಟುಲನು ಅನ್ನಲನ್ನಡು - ಗದ್ದೆಕೆಕ್ಕಿನ ಮರ್ಸಟಿ ರೋಜುರಾಡಿಕಲ್ ಕನುಕನ್ನನು ಚಂಪಿರಕ್ತಂ ಬೊಟ್ಟು ಪೆಟ್ಟುಕುನ್ನಡು(ನಕ್ಸಲೈಟರನು ಅಣ್ಣಂದಿರೆದನುಕುರ್ಚಿಯೇರಿದ ಮಾರನೆ ದಿನವೇ ರ್ಯಾಡಿಕಲ್ ಕನುಕನ್ನನ ಕೊಂದು ರಕ್ತದ ತಿಲಕ ಇಟ್ಟುಕೊಂಡನು)ಎಂದು ಅಂದಿನ ಮುಖ್ಯಮಂತ್ರಿಯನ್ನು ನಕ್ಸಲ್ಗಳು ಇಂದು ಹೀಗೆ ವಿವರಿಸಲಿರುವರೆಂದು ಊಹಿಸಿರದ ಕಾಲಸುದ್ದಿಪತ್ರಿಕೆಗಳು ಎನ್ಕೌಂಟರ್ ಎಂಬ ಪದದಿಂದ ತುಂಬಿದ್ದ ಸಮಯಹಾಗೂ ಎನ್ಕೌಂಟರ್ ನಲ್ಲಿ ಪೋಲೀಸರ,ನಕ್ಸಲ್ಗಳ ಸಾವಿನ ಸುದ್ದಿ ಕೇಳಿಬರುತ್ತಿದ್ದ ಸಮಯ.

ಅಥವಾ:
ನಕ್ಸಲ್ಬರಿಲೋನಾಗಲಿ ಬಟ್ಟಿನ ರೈತು ಗುಂಡೆ ಪೈ ಗುಂಡ್ಲ ವರ್ಷಮುನು ಕುರಿಪಿಂಚಿಂಡ್ರು
ಕಲಕತ್ತಾ ನಡಿವೀಧುಲ್ಲೋನ ನೆತ್ತುರಿಜೇರುಲು ಪಾರಿಂಚಿಂಡ್ರು
(ನಕ್ಸಲ್ಬರಿಯಲಿ ಗುದ್ದಲಿ ಹಿಡಿದ ರೈತರೆದೆಯಮೇಲೆ ಗುಂಡಿನ ಸುರಿಮಳೆ ಸುರಿಸಿದರುಕಲಕತ್ತಾ ನಡುಬೀದಿಗಳಲಿ ರಕ್ತದ ಝರಿಯಹರಿಸಿದರುಎಂದು ಹಾಡಿದ ದೂರದ ಕಲಕತ್ತಾ ಕಥೆಗೂ ಸಮೀಪದ ಎನ್ಕೌಂಟರ್ಗಳಿಗೂಸಂಬಂಧ ಕಾಣಿಸದ ಕಾಲವದು ಎಂದೂಹೇಳಬಹುದು.

ಚಂಡ್ರಪುಲ್ಲಾರೆಡ್ಡಿ ಎಂಬ ನಕ್ಸಲ್ ನಾಯಕನ ನಿಧನನಡೆದಾಡಲೂ ಕೈಲಾಗದೇ ಪೋಲೀಸ್ ದಸ್ತಗಿರಿಯಲ್ಲೇ ಉಸ್ಮಾನಿಯಾ ಆಸ್ಪತ್ರೆಗೆಅಡ್ಮಿಟ್ ಆಗಿದ್ದ ಎನ್ನಲಾದ ಕೊಂಡಪಲ್ಲಿ ಸೀತಾರಾಮಯ್ಯ ಎಂಬ ನಕ್ಸಲ್ ನಾಯಕ ರೋಮಾಂಚಕಾರಿಯಾಗಿ ತಪ್ಪಿಸಿಕೊಂಡ ದಂತ ಕಥೆ,ರಂಗುಲ ಕಲ ಚಿತ್ರದಲ್ಲಿ ಪೈಲಂ ಕೊಡುಕೋಪಟ್ನಂ ಕೊಡುಕೋ ಎಂಬ ಹಾಡಿನೊಂದಿಗೆ ಕಂಡ ಕೆಂಬಾವುಟ ಹಿಡಿದ ಭೂಗತಗದ್ದರ್ಹಾಗೂ ಕಂಡ ಮೇಲೇ ಕೇಳಿದ ಅವನ ಹೆಸರು ಯಾವುದೂ ಹೃದಯ ತಟ್ಟಿದ ವಿಷಯ ಆಗಿರಲಿಲ್ಲಎಲ್ಲೋ ದೂರದಬೊಲೀವಿಯಾದಲ್ಲಿ ನಡೆದ ಚೆ ಗವೇರನ ಕಥೆಯಷ್ಟೇ ಪರಕೀಯವಾಗಿ ಕಂಡಿದ್ದ ಅಂಶಗಳಿವು.

ಆದರೆ ಈಚೆಗೆ ತೆಲಂಗಾಣಾದಲ್ಲಿ ಸುತ್ತಾಡಿದಾಗ ಅನಿಸಿದ್ದುತೆಲಂಗಾಣಾ ಬದಲಾದ ಜಾಗ ಎಂದುಬದಲಾದ ಜಾಗ ಎಂದರೇನು?೧೯೪೬ರ ರೈತಾಂಗ ಚಳವಳಿಯ ನಂತರವೂ ಅಲ್ಲಿನ ಭೂಸ್ವಾಮ್ಯ ಪದ್ಧತಿ ಒಂದಿಷ್ಟೂ ಬದಲಾಗಿಲ್ಲಶೋಷಣೆಯೂ ಅದೇ ಮಟ್ಟದಲ್ಲಿದೆಎಂದು ವಾದಿಸುವವರಿರಬಹುದು.

ತೆಲಂಗಾಣಾ ರೈತಾಂಗ ಚಳವಳಿಯ ನಂತರ ಭೂಸಂಸ್ಕರಣೆಯ ಕಾಯಿದೆ ಜಾರಿಗೆ ಬಂದು  ಪ್ರಾಂತದ ಭೂ ಹಿಡವಳಿಯ ಸಾಮಾಜಿಕನಿರ್ಮಿತಿಯ ಕ್ರಮದಲ್ಲಿ ಕೆಲವು ಸ್ಪಷ್ಟ ಬದಲಾವಣೆಗಳಾದುವು ಎಂಬ ಧನಗರೆಯವರ ಮಾತಿಗೆ ವಿರುದ್ಧವಾಗಿ:
ಭೂ ಸಂಸ್ಕರಣಮೊಕ ಬೂಟಕಂಬುರಾದೋಪಿಡಿ ದೊಂಗಲ ನಾಟಕಂಬುರಾ,
ರೈತುದೇಶಮುಲೊ ರೈತು ಬಿಡ್ಡಕೇ ಭೂಮಿಲೇದುಯೆಟ್ಲಾ ನಾಯನಾ
ಪೆದ್ದ ಪೆದ್ದ ಭೂಸ್ವಾಮುಲೇಮೊರಾತಿಮ್ಮಿದಿ ಬೊಮ್ಮಿದಿ ಚೇಸಿನಾರುರಾ
ಸೆಂಟು ಭೂಮಿ ಚೇಜಾರಕುಂಡರಾಕುಕ್ಕ ಪೇರುನಾನಕ್ಕ ಪೇರುನಾ
ಲೆಕ್ಕಲು ವ್ರಾಸಿ ಚೇತುಲೆತ್ತಿನರು......
(ಭೂಸಂಸ್ಕರಣೆ ಒಂದು ಬೂಟಾಟಿಕೆದರೋಡೆಗಳ್ಳರ ನಾಟಕರೈತರ ದೇಶದಲಿ ರೈತಪುತ್ರನಿಗೇ ಭೂಮಿಯಿಲ್ಲ ಇದು ಹೇಗಪ್ಪೋದೊಡ್ಡಭೂಸ್ವಾಮಿಗಳು ಒಂದು ಸೆಂಟೂ ನೆಲ ಬಿಡದೇ ನಾಯಿನರಿಗಳ ಹೆಸರಲ್ಲಿ ಬರಕೊಂಡು ಕೈಯೆತ್ತಿದರಲ್ಲಪ್ಪೋಎಂದುಜನನಾಟ್ಯಮಂಡಲಿಯವರು ಹಾಡುವರುಇದರಲ್ಲಿ ಸತ್ಯಾಂಶವಿದ್ದರೂ ಇರಬಹುದು.

ಆದರೆ ನಾನಾಡುತ್ತಿರುವ ಬದಲಾವಣೆಯ ಮಾತು  ಅರ್ಥದ ಬದಲಾವಣೆದಲ್ಲಇಂಥಹ ಕ್ರಾಂತಿಕಾರಕ ಬದಲಾವಣೆಗಳು ಕಳೆದಾರುವರ್ಷಗಳಲ್ಲಿ ಆಗಿಲ್ಲವೆಂಬುದೂ ಎಲ್ಲರಿಗೂ ತಿಳಿದ ವಿಷಯವೇಬದಲಾವಣೆ ಇಂಥದ್ದು:

ಜಂಗಂಪಲ್ಲಿಯ ದೊರ ಮಹೇಂದ್ರಾರೆಡ್ಡಿ ಈಗ ಅಲ್ಲಿಲ್ಲಆತ ಹೈದರಾಬಾದಿನಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದಾನೆಹಾಗೂಜಂಗಂಪಲ್ಲಿಗೆ ಹೋಗುವುದು ಅಪರೂಪಸಂಜೆ ನಾಲ್ಕರ ನಂತರ ನಿಜಾಮಾಬಾದ್ನಿಂದ ಮೆದಕ್ ಮಾರ್ಗವಾಗಿ ಓಡುತ್ತಿದ್ದ ರಾಜ್ಯಪರಿವಹನ ನಿಗಮದ ಬಸ್ಸುಗಳು ರದ್ದಾಗಿದ್ದಾವೆ. (ಇದು ಕೆಲವರ್ಷಗಳ ಹಿಂದಿನ ಮಾತುಈಗ ಪರಿಸ್ಥಿತಿ ಉತ್ತಮಗೊಂಡಿದೆ) .ಮಾಲ್ತುಮ್ಮೆದ ಸಹಕಾರ ಸಂಘದ ಅಧ್ಯಕ್ಷ ತನ್ನ ಪದವಿಕಾಲ ಮುಗಿಯುವುದಕ್ಕೆ ಮೂರು ತಿಂಗಳ ಮೊದಲೇ ರಾಜೀನಾಮೆ ಪತ್ರತಯಾರಿಸಿಟ್ಟಿದ್ದಾನೆ.

ಮತ್ತು -
ಅದೇ ಜಂಗಂಪಲ್ಲಿಯ ಸಂಘದ ಅಧ್ಯಕ್ಷ ಗುವ್ವ ಬುಚ್ಚಯ್ಯಫರ್ಟಿಲೈಜರ್ ಕಾರೊಬಾರಿನಲ್ಲಿ ಹಣ ನುಂಗಿದ್ದನ್ನ ಪ್ರಜಾಕೋರ್ಟಿನ ಮುಂದೆಒಪ್ಪಿ ಪದವಿ ತ್ಯಾಗ ಮಾಡಿದ್ದಾನೆಕಾರ್ಯದರ್ಶಿ ಬಾಲರಾಜು ಒಳ್ಳೆಯ ಸಂಬಳ ಬರುತ್ತಿದ್ದ ತನ್ನ ಪರ್ಮನೆಂಟ್ ಕೆಲಸ ಬಿಟ್ಟಿದ್ದಾನೆ.ಕರೀಂನಗರದ ಡಾಕ್ಟರುಗಳು ರೋಗಿಯೊಬ್ಬನ ಬಳಿ ರೊ.೧೫ಕ್ಕಿಂತ ಹೆಚ್ಚು ಶುಲ್ಕ ಪಡೆಯಲು ಹಿಂಜರಿಯುತ್ತಾರೆ.

ಇದು ಬರೇ ಜಂಗಂಪಲ್ಲಿಯಮಾಲ್ತುಮ್ಮೆದಕರಿಂನಗರದ ಕಥೆಯಷ್ಟೇ ಅಲ್ಲ ಎಂಬುದೂ ಮುಖ್ಯ.

ಇಂಥ ಕಥೆಗಳೂದಿಢೀರ್ ನ್ಯಾಯ ಒದಗಿಸುವ ಪ್ರಜಾಕೋರ್ಟಿನ ವ್ಯವಸ್ಥೆ - ಮತ ನೀಡಿ ಎಬ್ಬಿಸಿದ ಬೃಹತ್ ಸಹಕಾರಿ ಯಂತ್ರಾಂಗಮಾಡಲಾರದ್ದನ್ನು ಚಿಟಿಕೆ ಹೊಡೆವಲ್ಲಿ ಮಾಡಿ ಮುಗಿಸುವ ಪರ್ಯಾಯ ವ್ಯವಸ್ಥೆ - ಅಂತರಂಗದ ಖುಷಿಯನ್ನ ನೀಡುತ್ತದೆನಿಜಆದರೆ ಕಥೆ ಇಲ್ಲಗೇ ಮುಕ್ತಾಯವಾಗುವುದಿಲ್ಲವಾದ್ದರಿಂದ  ಸತ್ಯ ಕಠೋರವಾಗುತ್ತದೆ.

 ಇಂಥ ಕಥೆಗಳನ್ನ ಸತ್ಯವಾಗಿಸುವುದು ಸರಳವಲ್ಲಇಂಥ ಕಥೆಗಳ ಹಿನ್ನೆಲೆಯಲ್ಲಿ ಕಠೋರ ಕ್ರೌರ್ಯದಅತ್ಯಂತ ಭೀತಿಯ ಭಾವನೆಅಡಕವಾಗಿರುತ್ತದೆರಕ್ತ ಸಂಬಂಧದ ಸಂದರ್ಭದಲ್ಲಿ ಮಾತನಾಡುವ ರಕ್ತ  ಪ್ರತೀಕಕ್ಕೂಬಲಿದಾನದ ಸಂದರ್ಭದಲ್ಲಿ ಹರಿವ ರಕ್ತದಪ್ರತೀಕಕ್ಕೂ ವ್ಯತ್ಯಾಸವಿದೆಯಷ್ಟೆಇಲ್ಲವಾದರೆ ಗುವ್ವ ಬುಚ್ಚಯ್ಯನೀನು ರಾಜೀನಾಮೆ ಕೊಡು ಎಂದಾಕ್ಷಣಕ್ಕೇ ರಾಜೀನಾಮೆ ಕೊಡುವಷ್ಟುಸಾಧುಪ್ರಾಣಿ ಆಗಿದ್ದರೆಆತ ಸಹಕಾರ ಸಂಘದ ಅಧ್ಯಕ್ಷನಾಗುತ್ತಿದ್ದುದಾದರೂ ಹೇಗೆಮತ್ತು ಏಕೆ?

ಕೈಕಾಲು ಕಡಿಯುವಪ್ರಾಣ ತೆಗೆಯುವರಕ್ತ ಚೆಲ್ಲುವನಿರಂತರ ಭೀತಿಯಲ್ಲಿ ಜನರ ಒಳಿತನ್ನು ಕಾಪಾಡುವಬೆದರಿಸಿ ನ್ಯಾಯಒದಗಿಸುವಸದ್ಯದ ವ್ಯವಸ್ಥೆಯಿಂದ ರೋಸಿ ಹೋದವರಿಗೆ ಆಶಾಕಿರಣದಂತೆ ಕಾಣುವ ಕ್ಷುದ್ರ ನ್ಯಾಯವ್ಯವಸ್ಥೆ ರೂಪತಾಳುವುದುಹೈದರಾಬಾದಿನ ಪ್ರತೀಗೋಡೆಯ ಮೇಲೂ ಕಾಣಿಸುವ ಮಾವೋ ತ್ಸೆ ತುಂಗನ (ಮಾವೋನ ಹೆಸರನ್ನು ಈಗಿತ್ತಲಾಗಿ ಮಾವೋ ಜೆಡಾಂಗ್ ಎಂದು ಎಲ್ಲ ಕಡೆ ಬರೆಯುತ್ತಿದ್ದರೂನಾನು  ಲೇಖನಕ್ಕೆಕಿವಿಗಿಂಪಾಗಿಚಂದ್ರಶೇಖರ ಕಂಬಾರರ ಪದ್ಯವಾಗಿ ನಿಂತಿರುವ ತ್ಸೆತುಂಗ ಎಂಬ ಉಚ್ಚಾರಣೆಯನ್ನೇ ಬಳಸಿದ್ದೇನೆ.) ಕೆಂಪು ಅಕ್ಷರಗಳ ವೇದವಾಕ್ಯದಿಂದ - "Power comes out of the barrel of the gun."


ಸಮಸಮಾಜದ ಆಶಯಮಂತ್ರ ಇಂದು ನಿನ್ನೆಯದಲ್ಲಇದು ತಲೆತಲಾಂತರದಿಂದ ಉಚ್ಚರಿಸಲ್ಪಟ್ಟದ್ದುಆದರೆ ಸಮಸಮಾಜದಉಟೋಪಿಯನ್ ಕನಸು ಕನಸಾಗಿಯೇ ಉಳಿಯುವುದು ಸಹಸೋವಿಯತ್ ರಷ್ಯಾದ ಕನಸಾಗಲೀಚೀನಾದ ಕನಸಾಗಲೀಪೂರ್ವಯೂರೋಪ್ ಕನಸಾಗಲೀ ನನಸಾಗುವುದು ಸರಳವೂ ಅಲ್ಲವಾಸ್ತವವಾದೀ ದೃಷ್ಟಿಕೋನವೂ ಅಲ್ಲಆದರೂಜಗತ್ತಿನ ಯಾವುದೇಕ್ರಾಂತಿಯ ಚರಿತ್ರೆಯನ್ನ ಗಮನಿಸಿದರೆವೇದ್ಯವಾಗುವುದುಬಡವರುಅತೀ ಬಡತನದಲ್ಲಿ ಶ್ರೀಮಂತರು ಅತೀ ಶ್ರೀಮಂತಿಕೆಯಲ್ಲೂಕೇಂದ್ರೀಕೃತವಾದಾಗಧೃವೀಕರಣ ಆದಾಗಪ್ರತಿಭಟನೆಜನರಿಂದಲೇ ಉದ್ಭವಿಸುತ್ತದೆಂಬುದುಮತ್ತು ಒಂದು ಮಟ್ಟದ ಸಮತೋಲನಇರುವಷ್ಟು ದಿನವೂ ಬಂಡಾಯದ ಯತ್ನ ಸುಪ್ತಾವಸ್ಥೆಯಲ್ಲೇ ಇರುತ್ತದೆಂಬುದು.

ಆತ ಕಟ್ಟಾ ಸಮಾಜದ ವಿರೋಧಿಯಾಗಿದ್ದಜಗತ್ತಿನ ಇಡೀ ಐಶ್ವರ್ಯವನ್ನು ಸರಿಸಮನಾಗಿ ಭೂಗ್ರಹದ ಪ್ರತಿ ಜೀವಿಗೂ ಹಂಚಿದರೆ,ಒಬ್ಬೊಬ್ಬರಿಗೂ ಕೇವಲ ೩೫ ಸೆಂಟುಗಳಿಗಿಂತಲೂ ಕಡಿಮೆ ಸಿಗುವುದೆಂಬ ಲೆಕ್ಕಾಚಾರವನ್ನು ಆತ ಮಾಡಿದ್ದರಿಂದಕ್ರಾಂತಿನಿಷ್ಪ್ರಯೋಜಕವೆಂದು ನಂಬಿzಇಸಾಬೆಲ್ ಅಯೆಂಡೆ ತನ್ನ ಕಾದಂಬರಿ ಈವಾಲೂನಾ  ಒಂದು ಪಾತ್ರವನ್ನು ಚಿತ್ರಿಸುವುದು ಹೀಗೆ.ಫಿಡೇಲ್ ಕಾಸ್ಟ್ರೋನ ಗೆಳೆಯನಾಗಿದ್ದ ಸಾಲ್ವಡಾರ್ ಅಯಂಡೆಯ ಸಂತತಿಪಾಬ್ಲೊ ನೆರೂಡಾಗಾರ್ಸಿಯಾ ಮಾರ್ಕೇಸ್ರಿಂದ ಸ್ಫೂರ್ತಿಪಡೆದ ಇಸಾಬೆಲ್ ಹೀಗೆ ಬರೆದಾಗ್ಯೂಆಕೆಯಾಗಲೀಸಮಾಜವಾದಿಗಳಾಗಲೀಕಡೆಗೆ ಬಂಡವಾಳಶಾಹಿಗಳೇ ಆಗಲೀ ಸಮಸಮಾಜದಉಟೋಪಿಯನ್ ಆಶಯದ ಕನಸು ಕಾಣುವುದನ್ನು ಬಿಡುವುದಿಲ್ಲ.

ಇದೇ ಆಶಯಮಂತ್ರವನ್ನು ಉಚ್ಚರಿಸುತ್ತಾ ತಮ್ಮನ್ನು ತಾವೇ ನಕ್ಸಲ್ವಾದಿಗಳೆಂದು ಕರೆದುಕೊಳ್ಳುವ ತೆಲಂಗಾಣಾದ  ಜನ ಒಂದುಹಿನ್ನೆಲೆಚರಿತ್ರೆಯ ಬೆಂಬಲದೊಂದಿಗೆ ಬಂದವರುತಮ್ಮ ಬೇರುಗಳನ್ನು ತೆಲಂಗಾಣ ರೈತಾಂಗ ಹೋರಾಟಕ್ಕೆ ಇಳಿಬಿಟ್ಟು ಅಲ್ಲಿಂದ ತಮ್ಮಮೂಲಸೆಲೆಯನ್ನ ಪಡೆದವರು.

ತೆಲಂಗಾಣ ರೈತಾಂಗ ೧೯೪೬ರಲ್ಲಿ ಬಂಡೇಳಲು ಚಾರಿತ್ರಿಕ ಸಾಮಾಜಿಕ ಕಾರಣಗಳಿದ್ದುವುಆಗ ಗುಲಾಮಗಿರಿಯ ಸಂಕೇತವಾದವೆಟ್ಟಿ ತೆಲಂಗಾಣದಲ್ಲಿ ಚಾಲ್ತಿಯಲ್ಲಿತುವ್ಯಕ್ತಿಯ ಶ್ರಮ ಮಾತ್ರವೇ ಅಲ್ಲದೇಶರೀರವೂ ಪರಕೀಯವಾಗಿತ್ತು. (ಅಂದಿನಭೂಸ್ವಾಮ್ಯಸಮಾಜದಲ್ಲಿ ಶರಿರ ತನ್ನದೇ ಆದರೂಅಂಗಾಂಗಗಳುಅವುಗಳ ಚಾಲನೆ ಭೂಸ್ವಾಮಿಗಳಜಮೀಂದಾರರ ಕೈಯಲ್ಲಿತ್ತುಅವನ ಮನೆ,ಮಡದಿಭೂಮಿ ಎಲ್ಲದರ ಮೇಲೂ ಜಮೀಂದಾರರ ಅಧಿಕಾರವಿತ್ತು. ಎಂದು ಜಯಧೀರ್ ತಿರುಮಲರಾವು ವಿವರಿಸಿದರೆಇದೇವಿಷಯವನ್ನು ದಾಶರಥಿ ರಂಗಾಚಾರ್ಯ ತಮ್ಮ ಕಾದಂಬರಿ ಚಿಲ್ಲರ ದೇವುಳ್ಳುವಿನಲ್ಲಿ  ಊರಲ್ಲಿರುವವರಲ್ಲಿ ಇಬ್ಬರೋ ಮೂವರೋಮಾತ್ರ ಮನುಷ್ಯಜಾತಿಗೆ ಸೇರಿದವರುಮಿಕ್ಕವರೆಲ್ಲಾ ದೊರೆ ಕೊಟ್ಟಿಗೆಯಲ್ಲಿ ಕಟ್ಟಿದ ದನಗಳು - ಎಂದುಕೊಂಡ ಎಂದುಬರೆಯುತ್ತಾರೆ.

ಅಂದಿನ ಹೋರಾಟ ಕಮ್ಯುನಿಸ್ಟ್ ಪಕ್ಷದ ಬೆಂಬಲದಿಂದ ನಡೆಯಿತು೧೯೪೬ರಿಂದ ಐದು ವರ್ಷಗಳ ಕಾಲಪಕ್ಷ  ಚಳವಳಿಯನ್ನುನಡೆಸಿಕೊಂಡು ಬಂತುಬಹುಶಃ ಅಷ್ಟೂದಿನ ಅವರು ಸುಧಾರಣೆಯ ನಿರೀಕ್ಷೆಯಲ್ಲಿ:
ಯಾರಿಗೆ ಬಂತುಯಾರಿಗೆ ಬಂತು
ನಲವತ್ತೇಳರ ಸ್ವಾತಂತ್ರ?
ಅಂತ ಕೇಳುತ್ತಾ ಇದ್ದಿದ್ದಿರಬೇಕು.
ಕೊಡಲಿ ಹಿಡಿದು ದುಡಿಯುವುದುಮತ್ತು ಅವಿಶ್ರಾಂತ ದುಡಿಯುತ್ತಿದ್ದುದನ್ನು ಗಮನಿಸಿದರೆಅವರು ದಿನವೂ ಹೋರಾಟಕ್ಕೆಸಂಸಿದ್ಧರಾಗಿದ್ದರೆನ್ನಿಸುತ್ತದೆಇಂಥ ಹೋರಾಟಗಾರರಿಗೆ ಪ್ರತ್ಯೇಕವಾಗಿ ಸಿಗಬಹುದಾಗಿದ್ದ ಶಿಕ್ಷಣ ಇವರಿಗೆ ಜೀವನವೇ ನೀಡಿತು.ಜಮೀಂದಾರರ ದೌರ್ಜನ್ಯಕ್ಕೊಳಗಾಗಿ ಕಕ್ಕಾಬಿಕ್ಕಿಯಾಗಿದ್ದ ಇವರಿಗೆ ಜೀವನವೇ ಒಂದು ಹೋರಾಟವಾಯಿತುಅವರ ಚಳವಳಿಗೆ ಅವರಜೀವನವೇ ಹಿನ್ನೆಲೆಯಾಯಿತುಗುದ್ದಲಿಕತ್ತಿಕುಡುಗೋಲು ಮುಂತಾದ ನಿತ್ಯೋತ್ಪತ್ತಿಯ ಸಾಧನಗಳೇ ಅವರಿಗೆ ಹೋರಾಟದಆಯುಧಗಳಾದವು ಹೀಗೆಅಂತರಂಗದ ಅವಶ್ಯಕತೆಯಿಂದ ಚಿಮ್ಮಿಬಂದ ಹೋರಾಟವಿದುಹೀಗೆ ವಿವರಣೆ ಕೊಟ್ಟ ತಿರುಮಲರಾವುವಾಕ್ಯಗಳುಅಂದಿನ ಪರಿಸ್ಥಿತಿಯ ಸಶಕ್ತ ಚಿತ್ರಣ ನೀಡುವುದುಇದೊಂದು ದೊಡ್ಡ ಪೆಟ್ರೋಲು ಟ್ಯಾಂಕಿನಂತಹ ಪರಿಸ್ಥಿತಿಇದು ಭುಗಿಲೆದ್ದುಉರಿಯಲು ಬೇಕಾದ್ದು ಕಮ್ಯುನಿಸ್ಟರ ರೂಪದಲ್ಲಿ ಬಂದ ಒಂದೇ ಒಂದು ಕಿಡಿ ಮಾತ್ರ.

ಅಂದು ಪ್ರಾರಂಭವಾದ ಚಳವಳಿಜನಬೆಂಬಲದಿಂದಲೇ ಐದು ವರ್ಷಕಾಲ ಮುಂದುವರೆಯಿತುಸುಮಾರು ೪೦೦೦ ಹಳ್ಳಿಗಳಲ್ಲಿನಲ್ಲಗೊಂಡವರಂಗಲ್ಖಮ್ಮಂಜಿಲ್ಲೆಗಳಲ್ಲಿ - ಪರ್ಯಾಯ ಸರಕಾರನ್ಯಾಯವ್ಯವಸ್ಥೆಯನ್ನು ಚಳವಳಿಗಾರರು ಶಕ್ತರೀತಿಯಲ್ಲಿಏರ್ಪಡಿಸಿದ್ದುಇಂದಿನ ಪ್ರಜಾಕೋರ್ಟುಗಳಿಗೆ ಅಂದೇ ಬೀಜ ಬಿತ್ತಿದಂತಾಗಿತ್ತು.

ಹೀಗೆಸಹಜಸ್ಫೂರ್ತಿಯಿಂದ ಬಂಡೆದ್ದ ತೆಲಂಗಾಣ ರೈತ ಚಳವಳಿಯಲ್ಲಿ ಇಂದಿನ ನಕ್ಸಲ್ಗಳು ತಮ್ಮ ಬೇರುಗಳನ್ನು ಕಂಡುಕೊಂಡಿದ್ದಾರೆ.ಅಂದು ಅವರು ಕರೆಯುತ್ತಿದ್ದ ಚೀಟಿ ಸಂಗಂ ಎಂಬ ಕಮ್ಯುನಿಸ್ಟ್ ಪಕ್ಷದ ಹೆಸರನ್ನೇ ಇಂದೂ ಎರ್ರ ಜೆಂಡಾ ಸಂಘಂ ಎಂದು ಸ್ಪಷ್ಟಪ್ರತಿಮೆಗಳೊಂದಿಗೆ ಮುಂದುವರೆಸಿದ್ದಾರೆಪ್ರಜಾನಾಟ್ಯಮಂಡಲಿಈಗ ಇನ್ನೂ ಜನರ ಬಳಿಗೆ ಬಂದು ಜನನಾಟ್ಯಮಂಡಲಿಯಾಗಿದೆ.ಹಾಗೂ ಅಂದಿನ ಸಂಕೇತಗಳನ್ನೇ ಇಂದೂ ಮುಂದುವರೆಸಿದ್ದಾರೆ.
‘Those who do not learn from history are condemned to relive it.’ (ಚರಿತ್ರೆಯಿಂದ ಪಾಠ ಕಲಿಯದವರು ಅದನ್ನ ಪುನಃ ಅನುಭವಿಸುವಶಾಪ ಪಡೆಯುತ್ತಾರೆಎಂದ ಜಾರ್ಜ್ ಸಾಂತಾಯನನ ಮಾತುಗಳನ್ನು ದೃಷ್ಟಿಯಲ್ಲಿಟ್ಟುಚರಿತ್ರೆಯ ದೃಕ್ಪಥವನ್ನು ನಾವುಗಮನಿಸಬೇಕಾಗಿದೆಚರಿತ್ರೆ ಬರೇ ಬೆಂಬಲವನ್ನಷ್ಟೇ ನೀಡುವುದಿಲ್ಲ - ಅದರ ತೊಂದರೆಯನ್ನೂ ನೀಡುತ್ತದೆ ತೊಂದರೆಗಳನ್ನೂ ನಾವುಗಮನಿಸುವುದು ಅವಶ್ಯಕ.

ಕಾರಣ:
ನಕ್ಸಲ್ಗಳನ್ನು ಸೆದೆಬಡೆವಥಳಿಸುವಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುವ ಸರಕಾರ ಎಂಬ ವ್ಯವಸ್ಥೆಯೂ ಚರಿತ್ರೆಯಿಂದ ತನ್ನ ಪಾಠವನ್ನಕಲಿತಿರಲಿಕ್ಕೆ ಸಾಕು.

ಇಷ್ಟೆಲ್ಲಾ ಚರಿತ್ರೆಯಲ್ಲಿ ಬೇರುಬಿಟ್ಟತಮ್ಮ ಹೆಸರಿಗೆ ಕಾರಣವಾದ ನಕ್ಸಲ್ಬರಿ ಚಳವಳಿಗೂ ಮುಂಚಿನ ಚಳವಳಿಗಳಲ್ಲಿ ತಮ್ಮನ್ನುಗುರುತಿಸಿಕೊಂಡ ಇಂದಿನ ನಕ್ಸಲ್ಗಳು  ಚರಿತ್ರೆಯನ್ನು ಅಂತರ್ಗತಮಾಡಿಕೊಂಡೂಚಾರೂ ಮಜುಂದಾರನ ಧೋರಣೆಗೊಗ್ಗುವನಕ್ಸಲ್ಗಳಾಗಿಯೇ ಮುಂದುವರೆಯುತ್ತಾರೆ೧೯೬೮ರಲ್ಲಿ ಚಾರೂ ಬರೆದ  ಸಾಲುಗಳು ಇಂದಿಗೂ ನಕ್ಸಲ್ಗಳಿಗೆ ವೇದವಾಕ್ಯ:

ಮೊದಲಬಾರಿಗೆ ರೈತಾಂಗ ತಮ್ಮ ಸಣ್ಣ ಪುಟ್ಟ ಬೇಡಿಕೆಗಳನ್ನಲ್ಲದೇ ಅಧಿಕಾರಮತ್ತು ಆಳುವ ಹಕ್ಕನ್ನು ಪಡೆಯಲು ಹೋರಾಡಿದ್ದಾರೆ.ನಕ್ಸಲ್ಬರಿ ಹೋರಾಟದಿಂದ ನಾವು ಕಲಿಯಬೇಕಾದ ಪಾಠವೇನಾದರೂ ಇದ್ದಲ್ಲಿ ಅದು ಇಷ್ಟೇಸಶಸ್ತ್ರ ಹೋರಾಟ ನಡೆಸುವುದೆಂದರೆಅದು ಭೂಮಿಪೈರುಅನ್ನಕ್ಕಾಗಿ ಅಲ್ಲ - ಸಂಪೂರ್ಣ ಬದಲಾವಣೆಗಾಗಿರಾಜ್ಯಾಡಳಿತದ ಅಧಿಕಾರಕ್ಕಾಗಿ.

 ದೇಶಂ ಮೀದೇ ಸಂಪದ ಮೀದೇಮೀರೆ ಏಲುಕೊಂಡೋ ನಾಯನಾ.. ( ದೇಶವು ನಿಮ್ಮದೆಸಂಪತ್ತೂ ನಿಮ್ಮದೇನೀವೇಆಳಿಕೊಳ್ಳೀ..) ಅನ್ನಲಾರ ತಮ್ಮುಲ್ಲಾರಕೂಲಿಬಿಡ್ಡಲಾರೋ ನಾಯನಾಅಕ್ಕಲಾರ ಚೆಲ್ಲೆಳ್ಳಾರ ರೈತು ಬಿಡ್ಡಲಾರೋ ನಾಯನಾಎಂದು ರೈತ ಕೂಲಿ ಜನಾಂಗಕ್ಕೆ ಗದ್ದರ್ ಬೃಂದದವರು ನೀಡುವ ಕರೆ  ಮೂಲಭೂತ ನಂಬಿಕೆಯಿಂದಲೇ ಉದ್ಭವಿಸಿರುವುದು.

ಆದರೂ:
ತೆಲಂಗಾಣಾದಲ್ಲಾಗಲೀಬಂಗಾಳದಲ್ಲಾಗಲೀ ಕಾರ್ಮಿಕರು ರಾಜ್ಯಾಡಳಿತದ ಹಕ್ಕನ್ನು ಪಡೆಯುವ ವಾಸ್ತವದ ಆಸುಪಾಸಿನಲ್ಲೂ ಇಲ್ಲ.ಬದಲಿಗೆ ಬಂಗಾಳದಲ್ಲಿ  ನಕ್ಸಲ್ಗಳ ಜನ್ಮಶತ್ರುಗಳಾದ ಮಾರ್ಕ್ಸವಾದಿಗಳು ಅನೇಕ ವರ್ಷಗಳಿಂದ ರಾಜ್ಯವಾಳುತ್ತಿದ್ದಾರೆ.

ಹೀಗಾದರೂ:
ದಿಢೀರ್ ನ್ಯಾಯ ಒದಗಿಸುವನಿರಂತರ ದುಃಖಿ ಮಧ್ಯಮವರ್ಗದವರ ಆರಾಮಕುರ್ಚಿ ಕ್ರಾಂತಿಯ ಕನಸನ್ನು  ರೂಪದಲ್ಲಿನನಸುಮಾಡಹೊರಟಿರುವರಾಬಿನ್ಹುಡ್ ಶೈಲಿಯ ಕಾವ್ಯನ್ಯಾಯವನ್ನೊದಗಿಸುವಂತೆ ಕಾಣುವ  ನಕ್ಸಲ್ಗಳನ್ನು ಟೀಕಿಸುತ್ತಲೇಪ್ರೀತಿಯ ಅಂತಃಕರಣ ಬೆಳೆಸಿಕೊಂಡವರಿದ್ದಾರೆ.

ಹಾಗೂ:
ಯಾವ ಲಿಖಿತ ಕಾನೂನಿಗೂ ಒಳಪಡದ ಮದುವೆ ಮಾಡಿಸುವ ಕ್ರಿಯೆಕಾನೂನಿಗೊಳಪಟ್ಟೂ ಏನೂ ಮಾಡಲಾಗದ ಭೂಮಿಯಹಂಚಿಕೆಯಂತಹ ವಿವಾದಗಳನ್ನು ಚಿಟಿಕೆ ಹೊಡೆಯುವುದರಲ್ಲಿ ಪ್ರಜಾಕೋರ್ಟುಗಳಲ್ಲಿ ಇತ್ಯರ್ಥವಾಗುವುದನ್ನು ಕಂಡ ಅನೇಕರು ನಕ್ಸಲ್ಗಳು ಮಾರಾಟಮಾಡುವ ವರ್ಗರಹಿತ ಸಮಸಮಾಜದ ಕನಸು ಕೊಳ್ಳಲು ತಯಾರಿದ್ದಾರೆ.


ನಕ್ಸಲ್ಗಳು ಯಾರುಅವರು ಪ್ರತಿನಿಧಿಸುವುದು ಏನನ್ನುಅವರು ಎಷ್ಟರ ಮಟ್ಟಿಗೆ ತಮ್ಮ ಉದ್ದೇಶ ಸಾಧನೆಯಲ್ಲಿ ಸಫಲರಾಗಿದ್ದಾರೆ?ಅಥವಾ ಅವರ ಉದ್ದೇಶವಾದರೂ ಏನು ಎಲ್ಲ ಪ್ರಶ್ನೆಗಳೂ ಯಾರನ್ನಾದರೂ ಕಾಡಲಿಕ್ಕೆ ಸಾಕುನಕ್ಸಲ್ಗಳು ನಾಸ್ತಿಕರೇ?ಸರ್ವಶೂನ್ಯವಾದಿಗಳೇಎಂದೆಲ್ಲಾ ಪ್ರಶ್ನೆಗಳು ಮನಸ್ಸಿಗೆ ಬಂದಾಗಲೇ ಕಲಕತ್ತಾದ ಕಾಳೀ ಮಂದಿರದಲ್ಲಿ ಪೂಜೆ ಸಲ್ಲಿಸುತ್ತಿದ್ದರೆನ್ನಲಾದನಕ್ಸಲ್ಗಳ ಕಥೆ ನೆನಪಿಗೆ ಬರುತ್ತದೆ:

ಅದನ್ನು ಕಂಡ ಯಾರೋ ಕೇಳಿದರಂತೆ - ಏನಿಲ್ಲಿನಾಸ್ತಿಕರಾದ ನಕ್ಸಲ್ಗಳು ಕಾಳೀಮಂದಿರದಲ್ಲಿ? ಎಂಬುದಕ್ಕೆ ಮಾವೋ ತೊನಕ್ಸಲ್ ಎಂದು ಕಲಕತ್ತಾದ ಕಾಳೀ ಮಾಳನ್ನು ಚೀನಾದ ಚೇರ್ಮನ್ ಮಾವೋ ಜತೆ ಸೇರಿಸಿ ಇಬ್ಬರನ್ನೂ ನಕ್ಸಲ್ಬರಿಗೆ ಕಳಿಸಿದ ಬುದ್ಧಿವಂತರು ನಿರಂತರ ಚಳವಳಿಗಾರರು.

ಮೊದಲಿಗೆ ಉದ್ದೇಶಗುರಿ ಎಲ್ಲವೂ ಸ್ಪಷ್ಟವಾಗಿತ್ತು.
ಅವರೆಲ್ಲರೂ ಒಂದಾಗಿದ್ದರು.
ಕಮ್ಯುನಿಸ್ಟರೂಕಾಂಗ್ರೆಸಿನವರೂ ಸ್ವತಂತ್ರ ಭಾರತದ ಕನಸುಗಾರರುಆಗತೆಲಂಗಾಣಾ ಚಳವಳಿ ಪ್ರಾರಂಭವಾದಾಗ ಬ್ರಿಟಿಷ್ಸಾಮ್ರಾಜ್ಯದ ವಿರುದ್ಧರಾಷ್ಟ್ರೀಯತೆಯ ಪರವಾಗಿ ಇದು ಪ್ರಾರಂಭವಾಯಿತುಇಬ್ಬರ ಕನಸೇನೂ ಒಂದೇ ಆಗಿರಲಿಲ್ಲಕಾಂಗ್ರೆಸ್ಸಿನಅತಿಶುದ್ಧಅಹಿಂಸಾತ್ಮಕ ಮಾರ್ಗ ಕಮ್ಯುನಿಸ್ಟರು ಬಂಡೇಳಲು ಸಹಕಾರಿಯಾಗಿರಲಿಲ್ಲಆದರೂ ಪ್ರಯತ್ನ ಮಾಡಿದರು - ಒಂದುವಿಚಿತ್ರ ಸಂಯೋಜನೆಯ  ಮದುವೆಮುಂದೆ ಮುರಿದುಬೀಳಲೆಂದೇ ನೆರವೇರಿತು.

ಗಾಂಧಿವಾದದ ಪ್ರತಿಭಟನೆಯ ವಿಧಾನದ ಬಗ್ಗೆಅಂತರ್ಗತ ಭಿನ್ನತೆ ಹಾಗೂ ಅಪ್ರಿಯತೆ ಇದ್ದಾಗ್ಯೂ ಕಮ್ಯುನಿಸ್ಟರು ಅವರಜತೆಜತೆಯಲ್ಲೇ ನಡೆದರುಬಹುಶಃ ಹೈದರಾಬಾದ್ ಭಾರತದ ಸಂವಿಧಾನದಡಿ ಸೇರುವುದು ವಾಸ್ತವವಾದೀತೆಂದು ಕಮ್ಯುನಿಸ್ಟರುನಿರೀಕ್ಷಿಸಿರಲಿಲ್ಲವೆನ್ನಿಸುತ್ತದೆಆಗಲೇಅಷ್ಟುಹೊತ್ತಿಗಾಗಲೇ ತೆಲಂಗಾಣಾದ ಚಳವಳಿ ಪ್ರಾರಂಭವಾಗಿಬಿಟ್ಟಿತ್ತಾದ್ದರಿಂದ ಶಾಂತಿಯುತಅಹಿಂಸಾವಾದದ ಚಳವಳಿ ಅವರನ್ನು ಸಾಕಷ್ಟು ಇಕ್ಕಟ್ಟಿಗೂ ಸಿಕ್ಕಿಸಿತ್ತುಮಾನಸಿಕವಾದ  ಆಲೋಚನೆಯನ್ನೂ ಮೀರಿಕಮ್ಯುನಿಸ್ಟರುಪೆಟ್ಟುತಿಂದರೆನ್ನಿಸುತ್ತದೆಸತ್ಯಾಗ್ರಹದ ಭಾಗವಾಗಿ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿನ ಈಚಲ ಮರಗಳನ್ನುಕಡಿಯತೊಡಗಿದರುತೆರಿಗೆಯ ರೂಪದಲ್ಲಿ ನಿಜಾಮನ ಬೊಕ್ಕಸಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸೇರುತ್ತಿದ್ದ ರೊಕ್ಕ ಸೇರದಿರಲೆಂಬುದುಒಂದು ಕಾರಣವಾದರೆಕಳ್ಳು ಕುಡಿಯದಿರುವ ಬಗ್ಗೆ ಇದ್ದ ಗಾಂಧಿವಾದದ ನೀತಿಯೂ ಒಂದು ಕಾರಣಇದರ ಫಲವಾಗಿ ಕಮ್ಮುನಿಸ್ಟ್ದಳ ಗಳ ಅನೇಕ ಕಾರ್ಯಕರ್ತರಿಗೆ ವೃತ್ತಿನಾಶವಾಯಿತುಕಳ್ಳು ಇಳಿಸುವವರ ಬೆಂಬಲ ತಪ್ಪುವುದೆಂಬ ಭೀತಿಯೊಂದಿಗೆಕಮ್ಯುನಿಸ್ಟರು ಕಾಂಗ್ರೆಸಿಗರ ಸಂಗ ಬಿಟ್ಟರು. ಎಂದು ಧನಗರೆ ಹೇಳುತ್ತಾರೆಕನಸುಗಾರ ಕಾಂಗ್ರೆಸ್ ಸಂಗವನ್ನು ಅಂದಿಗೆ ವಾಸ್ತವವಾದಿಎನ್ನಿಸಿದಜನಪರ ಎನ್ನಿಸಿದ ಕಮ್ಯುನಿಸ್ಟ್ ಪಕ್ಷ ಬಿಡಬೇಕಾಯಿತು.

ಅಂದು ಗುರಿ ಒಂದೇ ಇದ್ದೂಮಾರ್ಗ ಒಪ್ಪಿತವಾಗಲಿಲ್ಲವಾದ್ದರಿಂದಮೊದಲ ಬಾರಿಗೆ ಎರಡು ಪಕ್ಷಗಳು ಬೇರುಬೇರಾದವುಆನಂತರಮುಂದುವರೆದಮುಂದುವರೆದೇ ಇರುವ  ರೈತಾಂಗ ಹೋರಾಟಅನೇಕ ಮಳೆಗಾಲಗಳನ್ನೂಬರಗಳನ್ನೂ ಕಂಡಿದೆಸ್ವಾತಂತ್ರಬಂದ ನಂತರ ಕಮ್ಯುನಿಸ್ಟರ ಗೆಳೆತನ ಮಾಡಿದ್ದ ಕಾಂಗ್ರೆಸ್ಸು ಅಧಿಕಾರಕ್ಕೆ ಬಂದಂತಾಗಿಅದೇ ವ್ಯವಸ್ಥೆಯ ಅಂಗವೂಸರ್ವಾಂಗವೂ,ಕಡೆಗೆ ಖುದ್ ವ್ಯವಸ್ಥೆಯೇ ಆಗಿಬಿಟ್ಟಿತುಭಾರತ ಸಂವಿಧಾನದಡಿ ಸೇರಲೊಪ್ಪದ ನಿಜಾಮ ನವಾಬಅವನ ರಜಾಕರ ಸೈನ್ಯಸ್ಥಳೀಯಜಮೀಂದಾರರು - ಹಾಗೂ ನಿಜಾಮನ ವಿರುದ್ಧ ಕತ್ತಿ ಎತ್ತಿದ ಭಾರತ ಸರಕಾರಸರಕಾರದಿಂದ ನಿಷೇಧಿಸಲ್ಪಟ್ಟ ಕಮ್ಯುನಿಸ್ಟ್ ಪಕ್ಷ -ಎಲ್ಲರೂ ಎಲ್ಲರ ವೈರಿಗಳಾಗಿ ಹೋದರು೧೯೫೬ರಲ್ಲಿ ಭೂಸುಧಾರಣೆಯ ಕಾಯಿದೆಯ ನೆರಳಿನಲ್ಲಿ ಕಮ್ಯುನಿಸ್ಟ್ ಪಕ್ಷವೂ ತನ್ನಚಳವಳಿಯಿಂದ ವಿರಮಿಸಿತುಆಗ ಅದನ್ನು ವಿರೋಧಿಸಿದರೂಕಮ್ಯುನಿಸ್ಟರಿಂದ ಬೇರ್ಪಟ್ಟ ಮಾರ್ಕ್ಸಿಸ್ಟರೂಚಾರೂ ಮಜುಂದಾರನಉದ್ಭವದೊಂದಿಗೆ ಮಾರ್ಕ್ಸಿಸ್ಟರಿಂದ ಬೇರ್ಪಟ್ಟ ಮಾರ್ಕ್ಸಿಸ್ಟ್-ಲೆನಿನಿಸ್ಟರೂಅವರುಗಳಲ್ಲಿ ಹಂತಹಂತವಾಗಿ ಪಂಥಪಂಥವಾಗಿ ಒಡೆದಮಾವೋವಾದಿಗಳು - ಪಿ.ಡಬ್ಲ್ಯು.ಜಿಕೆ.ಎಸ್.ಗ್ರೂಪ್ಸಿ.ಪಿ.ಗ್ರೂಪ್ಚಾರೂಪರ ವಿನೋದ್ ಮಿಶ್ರಾ ಗ್ರೂಪ್ - ಹೀಗೆಒಂದೇ ಉದ್ದೇಶಸಾಧನೆಗಾಗಿಮಾರ್ಕ್ಸ್ಲೆನಿನ್ಮಾವೋರ ಹೆಸರಿನ ಜೊತೆ ಸರಿಸಮನಾಗಿತಮ್ಮ ಹೆಸರನ್ನೂ ಜೋಡಿಸಹೊರಟವರು ನಮಗೆಕಂಡುಬರುತ್ತಾರೆ.


ಏನಾಗುತ್ತಿದೆ ನೋಡಿ - ಒಂದೇ ವಿಚಾರವಾದವನ್ನ ಪ್ರತಿನಿಧಿಸುವವರು ಯಾರಾದರೂ ಇದ್ದಾರಾಅತಿಯಾಗಿ ಹೊಸ ಹೊಸ ಪಕ್ಷಗಳುಉದ್ಭವಿಸಿವೆನಮ್ಮಿಂದ ಮಾರ್ಕ್ಸವಾದಿಗಳು ಬೇರ್ಪಟ್ಟರುಅವರಿಂದ ನಕ್ಸಲ್ಗಳುಅವರಲ್ಲೂ ಪಂಥಗಳುಒಗ್ಗಟ್ಟಿಲ್ಲದೇ ನಮ್ಮಲ್ಲೇ ನಾವುಕಿತ್ತಾಡುತ್ತಿದ್ದೇವೆನಾವು ಮಾಡಿದ ತಪ್ಪನ್ನು ತಿದ್ದಲು ಸಾಧ್ಯವಿಲ್ಲವೆಂದೇನಲ್ಲಆದರೆ ಶತ್ರುವಿನ ವಿರುದ್ಧ ಹೋರಾಡುವುದಕ್ಕೆ ಬದಲುನಮ್ಮಲ್ಲೇ ನಾವು ಹೋರಾಡುತ್ತಿದ್ದೇವೆ. ಎಂದು ಬ್ರಿಜ್ರಾಣಿ ಗೌರ್ ಹೇಳಿದ್ದಕ್ಕೆ ಪ್ರತಿಕ್ರಿಯೆಯೇ ಎಂಬಂತೆ ರಬೀಂದ್ರ ರೇ ಬರೆದಿದ್ದಾರೆ - ಎಲ್ಲವೂ ಮುಸುಕಿನೊಳಗೆ ಗುದ್ದಾಟ ನಡೆಸುವ ಹಾಗೆ ಕಾಣಿಸುತ್ತದೆಇಲ್ಲಿ ಶತ್ರು ಯಾರೆಂಬುದು ಸತ್ಯ ಸ್ಪಷ್ಟವಾಗಿದ್ದರೂಪ್ರಹಾರಮಾಡುವವ ಗಾಳಿಯಲ್ಲಿರುವ ಊಹಾವ್ಯಕ್ತಿಯಾಗಿದ್ದಾನೆ.

ಐವತ್ತು ವರ್ಷಗಳಿಂದಲೂ ನಡೆದು ಬಂದಿರುವ  ಯುದ್ಧವ್ಯವಸ್ಥೆಯ ವಿರುದ್ಧ ಕೇಂದ್ರೀಕೃತವಾಗದೇ ಪರಸ್ಪರ ಧೋರಣೆಗಳ ವಿರುದ್ಧದಯುದ್ಧವಾಗಿ ಕಡೆಗೆ ಗುಂಪು ಘರ್ಷಣೆಯ ಬೀದಿ ಜಗಳವಾಗಿ ಪರಿವರ್ತನೆಗೊಂಡಿದೆ.


ಆರು ವರ್ಷಗಳ ಹಿಂದೆಕರೀಂನಗರ ಜಿಲ್ಲೆ ರಾಯಕಲ್ ಗ್ರಾಮದಲ್ಲಿ ನಕ್ಸಲ್ ಚಟುವಟಿಕೆಯ ತರಂಗಗಳು ತಾಗಿದ್ದುವು.

ಅಂದು ರಾತ್ರೆ ಟೆಂಟಿನಲ್ಲಿ ರೋಷಗಾಡು ಸಿನೇಮಾ ನೋಡಿ ಸಹಕಾರ ಸಂಘದ ಕಾರ್ಯದರ್ಶಿ ಸುಭಾಷ್ ರಾಜುವಿನ ಮನೆಗೆಮರಳುತ್ತಿದ್ದಾಗ - ಮಫ್ತಿಯಲ್ಲಿದ್ದ ಪೋಲೀಸರು ನಮ್ಮನ್ನ ಹಿಡಿದರುಊರಿಗೆ ಹೊಸಬರಾಗಿಅದರಲ್ಲೂ ದಾದಾಗಳಂತೆ ಲುಂಗಿ ಧರಿಸಿಸಿನೇಮಾಕ್ಕೆ ಹೋದ ನಮ್ಮನ್ನು ಅವರು ನಕ್ಸಲ್ಗಳೆಂದು ಭಾವಿಸಿದ್ದು ಸಹಜವೇ ಇದ್ದೀತುಆಗ ನಮ್ಮ ಕೆಲಸಉದ್ದೇಶಗಳನ್ನಪೋಲೀಸರಿಗೆ ವಿವರಿಸುವುದು ಸ್ವಲ್ಪ ಕಷ್ಟವೇ ಆಯಿತುಅವರು ಕಡೆಗೂ ಸುಭಾಷ್ರಾಜುವಿನ ಮನೆಯವರೆಗೂ ಬಂದು ಅಲ್ಲಿ ನಮ್ಮ ಬಗ್ಗೆವಿಚಾರಣೆ ಮಾಡಿದ ನಂತರವೇ ನಮ್ಮನ್ನು ಬಿಟ್ಟುಕೊಟ್ಟಿದ್ದುಸದ್ಯಸುಭಾಷ್ರಾಜುವಿಗೆ ನಕ್ಸಲ್ ಸಂಬಂಧಗಳೇನೂ ಇರಲಿಲ್ಲ!

ಆದರೆ ಈಚೆಗೆ ತೆಲಂಗಾಣಾದಲ್ಲಿ ಸುತ್ತಾಡಿದಾಗ ಅನ್ನಿಸಿದ್ದುಈಗೀಗ ಅಷ್ಟು ಸರಳವಾಗಿ ಪೋಲೀಸರು ನಕ್ಸಲ್ಗಳ ಹಿಂದೆ ಬೀಳುವುದಿಲ್ಲ.ಇದಕ್ಕೆ ಕಾರಣಗಳೂ ಉಂಟುಒಂದು - ಮುಖ್ಯಮಂತ್ರಿ ಚೆನ್ನಾರೆಡ್ಡಿ ನಕ್ಸಲ್ಗಳ ಬಗ್ಗೆ ಸಡಿಲ ನೀತಿ ಅನುಸರಿಸುತ್ತಿದ್ದಾರೆಎರಡು -ನಕ್ಸಲ್ಗಳ ಬಳಿ ಇಂದು ಶಸ್ತ್ರಾಸ್ತ್ರಗಳ ಭಂಡಾರವೇ ಇದೆ ಎಂಬ ಪ್ರತೀತಿ ಲೇಖನದ ಪ್ರತಿ ತಯಾರಿಸುತ್ತಿದ್ದ ಸಮಯಕ್ಕೆ ನಕ್ಸಲ್ನಾಯಕಿ ಪದ್ಮಕ್ಕಳನ್ನು ಪೋಲೀಸರು ಎನ್ಕೌಂಟರ್ನಲ್ಲಿ ಕೊಂದು ಹಾಕಿದ್ದರುಕಾರಣಪದ್ಮಕ್ಕ ಮತ್ತು ಆಕೆಯ ಸಹಚರರು ಶಸ್ತ್ರಾಸ್ತ್ರಹಿಡಿದು ಓಡಾಡುತ್ತಿದ್ದರಂತೆಈಗಿನ ಮುಖ್ಯಮಂತ್ರಿ ಚಂದ್ರಬಾಬುವಿಗೂನಕ್ಸಲ್ ನಾಯಕರಿಗೂ ನಡುವೆ ಮಾತುಕತೆ ನಡೆಯುತ್ತಿದ್ದು - ಕಾರ್ಯಾಚರಣೆಯಿಂದ ಅದಕ್ಕೆ ಧಕ್ಕೆಯುಂಟಾಗಿದೆಹೀಗಾದರೂ ನಕ್ಸಲ್ಗಲು ತಮ್ಮ ಶಸ್ತ್ರಾಸ್ತ್ರ ಕೈಬಿಟ್ಟು ಶರಣಾಗುವರೆಂಬ ಸರಕಾರದಆಶಾವಾದ ನಕ್ಸಲ್ಗಳ ಸಂಪೂರ್ಣ ಕ್ರಾಂತಿಯ ಆಶಾವಾದದಂತೆಯೇ ಕಾಣುತ್ತದೆ.

ಹಾಗೆ ನೋಡಿದರೆತೆಲಂಗಾಣಾ ರೈತ ಚಳವಳಿ ವಿರಮಿಸಿದ ೧೯೫೬ರ ಪರಿಸ್ಥಿತಿಗೂಇಂದಿಗೂ ತುಂಬಾ ಸಾಮ್ಯವಿದೆಹಾಗೂ -ನಕ್ಸಲ್ಗಳು ಚರಿತ್ರೆಯಿಂದ ಪಾಠ ಕಲಿತಿದ್ದಾರೆನ್ನಿಸುತ್ತದೆ.

೧೯೫೬ರಲ್ಲಿ ಕಮ್ಯುನಿಸ್ಟ್ ಪಕ್ಷದ ಮೇಲಿನ ನಿಷೇಧವನ್ನು ಅಂದಿನ ಭಾರತ ಸರಕಾರ ಕಿತ್ತುಹಾಕಿದಾಗಭೂಗತ ಚಳವಳಿಗಾರರೆಲ್ಲಹೊರಬಂದು ಚಳವಳಿ ವಿರಮಿಸಿ ಪಾರ್ಲಮೆಂಟರಿ ಪದ್ಧತಿಯನ್ನು ಅನುಸರಿಸಲು ಒಪ್ಪಿ ಬಂದರುಬಸವಪುನ್ನಯ್ಯಪುಚ್ಚಲಪಲ್ಲಿಸುಂದರಯ್ಯಚಂಡ್ರರಾಜೇಶ್ವರರಾವು  ಎಲ್ಲರೂ ತೆಲಂಗಾಣಾ ಚಳವಳಿಯಲ್ಲಿ ಭಾಗವಹಿಸಿಕಡೆಗೆ ರಾಜಕೀಯ ಮುಖ್ಯವಾಹಿನಿಗೆಸೇರಿದವರು.

ಈಗಿತ್ತಲಾಗಿ ಚೆನ್ನಾರೆಡ್ಡಿ ಸರಕಾರ ಬಂದಮೇಲೆ - ಎನ್.ಟಿ.ಆರ್ ಅವರ ಎನ್ಕೌಂಟರ್ ನೀತಿ ಸಡಿಲಾದಂತಾಗಿಒಂದರ್ಥದಲ್ಲಿನಕ್ಸಲ್ಗಳ ಮೇಲಿದ್ದ ನಿಷೇಧ ತೆಗೆದಂತೆಯೇ ಆಗಿದೆ೧೯೫೬ರ ಪರಿಸ್ಥಿತಿ ಮರುಕಳಿಸುವುದಾದರೆಎಲ್ಲರೂ ರಾಜಕಾರಣದಮುಖ್ಯವಾಹಿನಿಯಲ್ಲಿ ಸೇರಿ - ಚುನಾವಣೆಗಳಲ್ಲಿ ಪಾಲ್ಗೊಳ್ಳಬೇಕುಹಾಗೇನಾದರೂ ಪಾಲ್ಗೊಂಡಲ್ಲಿ ಅವರು ಗೆದ್ದೇ ಗೆಲ್ಲುವರೆಂಬ ಮಾತನ್ನುಅಲ್ಲಿನ ಜನ ನಂಬಿದ್ದರು. (೨೦೦೨ನೇ ಇಸವಿಯಲ್ಲಿಅವರುಗಳಲ್ಲದೇ - ತೆಲಂಗಾಣಾ ರಾಷ್ಟ್ರ ಸಮಿತಿಯ ಚಂದ್ರಶೇಖರ ರಾವು ಕೂಡಾಬಂದು - ಮತ್ತೆ ಪ್ರತ್ಯೇಕ ತೆಲಂಗಾಣಾ ರಾಜ್ಯದ ಬಾವುಟವನ್ನ ಎತ್ತಿರುವುದರಿಂದ - ಕ್ರಾಂತಿ ಪ್ರಜಾಕೋರ್ಟುಗಳ ಹೊಸತನನಾಶವಾಗಿರುವುದರಿಂದ - ಏನಾಗುವುದೋ ತಿಳಿಯದ ಪರಿಸ್ಥಿತಿಯಲ್ಲಿದೆ.)

ಹಾಗೇನಾದರೂ ಮುಖ್ಯವಾಹಿನಿಗೆ ಬಂದರೆ ಅಧಿಕಾರ ಬರಬಹುದೆಂದು ಖಾತ್ರಿಯಿದ್ದರೂ - ಇಂಥಹ ರಾಜಕಾರಣದಲ್ಲಿ ಪಾಲ್ಗೊಳ್ಳುವುದುನಕ್ಸಲ್ ಸಿದ್ಧಾಂತಕ್ಕೇ ವಿರುದ್ಧವೇನೋ ಎನ್ನಿಸುವಂತಿದೆಎಷ್ಟಾದರೂ ಚೇರ್ಮನ್ ಮಾವೋ ಬಂದೂಕಿನ ನಳಿಗೆಯಿಂದ ಅಧಿಕಾರಬರುತ್ತದೆಂದು ಅಪ್ಪಣೆ ಕೊಡಿಸಿದ ಮೇಲೆಪ್ರಜಾಪ್ರಭುತ್ವ ಪದ್ಧತಿಯ ಬಗ್ಗೆ ತೆಲೆ ಕೆಡಿಸಿಕೊಳ್ಳಬೇಕಾದರೂ ಯಾಕೆ?

ಬದಲಿಗೆ:
ಪ್ರತಿಬಾರಿಯೂ ಎನ್ಕೌಂಟರುಗಳನ್ನು ಕಡಿಮೆಮಾಡಿಪರಸ್ಥಿತಿಯನ್ನು ಸಡಲಿಸಿದಾಗೆಲ್ಲಾನಕ್ಸಲ್ಗಳು ಶಸ್ತ್ರಾಸ್ತ್ರ ಖರೀದಿಗೆಇಳಿಯುವರೆಂದು ಸುದ್ದಿನಮಗೆ ಬಂದೂಕು ರಿವಾಲ್ವರ್ಗಳು ಪೋಲೀಸರಿಂದಲೇ ಬರುತ್ತದೆ - ಅಂದರೆ ಅವರಿಂದ ನಾವು ಅದನ್ನಕಿತ್ತುಕೊಳ್ಳುತ್ತೇವೆ. ಎಂದು ಗದ್ದರ್ ಹಿಂದೊಮ್ಮೆ ಹೇಳಿದಾಗ್ಯೂ ಹಳ್ಳಿಗಾಡಿನ ಜನ ಆಡಿಕೊಳ್ಳುವ ಮಾತೇ ಬೇರೆ - ಪೋಲೀಸರಬಳಿಇಂಥ ಆಧುನಿಕ ಶಸ್ತ್ರಾಸ್ತ್ರಗಳೆಲ್ಲಿಇದು ಪಂಜಾಬು ಕಶ್ಮೀರಗಳಿಂದ ಬಂದಿರುವ ಮಾಲೇ ಆಗಿರಬೇಕು.

ಅಂದು ತೆಲಂಗಾಣಾ ಚಳವಳಿಯ ಸಂದರ್ಭದಲ್ಲಿ:
ಭೂಮಿಯನ್ನು ಪ್ರಜಾಕೋರ್ಟಿನ ಮೂಲಕ ಜನ ತಮ್ಮಲ್ಲೇ ಹಂಚಿಕೊಂಡಿದ್ದರೆಂದು ಪ್ರತೀತಿಅದು ನಿಜವೂ ಹೌದುಆದರೆ ಅದುಅರ್ಧಸತ್ಯಮಾತ್ರಚಳವಳಿ ವಿರಮಿಸಿದ ನಂತರಜಮೀಂದಾರರು  ಭೂಮಿಯನ್ನು ಮರಳಿ ಪಡೆದರೆಂಬುದು ಜನಜನಿತಆದರಿಂದು -ಪ್ರಜಾಕೋರ್ಟಿನ ಮೂಲಕ ಮರುಹಂಚಿಕೆಯಾದ ಭೂಮಿಯನ್ನು ಬಂದೂಕಿನ ಬೆದರಿಕೆಯನ್ನಾದರೂ ಒಡ್ಡಿ ಮಂಡಲ ಕಾರ್ಯಾಲಯದಲ್ಲಿರೆಜಿಸ್ಟ್ರಿ ಮಾಡಿಸುತ್ತಿದ್ದಾರೆಎಂದೂ  ದೇಶದ ಕಾನೂನನ್ನು ಒಪ್ಪಿರದ  ಗುಂಪು ಇದ್ದಕ್ಕಿದ್ದಂತೆಅದರ ಪ್ರಯೋಜನವನ್ನಕಂಡುಕೊಂಡಿದೆ.

ಅದು ನಕ್ಸಲ್ಗಳ ನೇರ ಪ್ರಹಾರದ ಮಾತಾಯಿತುಅದಲ್ಲದೇ ಅಕ್ಕಪಕ್ಕದ ಹಳ್ಳಿಗಳಲ್ಲಿ ಹೆದರಿದ ಹಳೇ ಜಮೀಂದಾರರು ತಮ್ಮಭೂಮಿಯನ್ನ ಸಿಕ್ಕಷ್ಟು ಬೆಲೆಗೆ ಮಾರಾಟಮಾಡಿ ನಗರದತ್ತ ಪಲಾಯನ ಮಾಡುತ್ತಿದ್ದಾರೆನಕ್ಸಲ್ಬರಿಯ ತಾಯಿನಾಡಾದ ಪಶ್ಚಿಮಬಂಗಾಳದಲ್ಲಿ ಮುಖ್ಯವಾಹಿನಿಗೆ ಸೇರಿದ ಮಾರ್ಕ್ಸಿಸ್ಟರು ಅಧಿಕಾರ ಗಿಟ್ಟಿಸಿಕೊಂಡು ಕಾನೂನಿನ ರೀತ್ಯಾ ಮಾಡಿದ ಕೆಲಸವನ್ನ ಇಲ್ಲಿಬಂದೂಕು ಹಿಡಿದೇ ಸಾಧಿಸುವ ಹಠವನ್ನ ತೆಲಂಗಾಣಾದ ನಕ್ಸಲ್ಗಳು ಪ್ರದರ್ಶಿಸಿದ್ದಾರೆಆದರೂ ಕಡೆಗೆ ಅವರ ನೆರವಿಗೆ ಬರುತ್ತಿರುವುದುಕಾನೂನು ಕಾಯಿದೆಯೇ!!

ವಿವಿಧ ರಾಜಕೀಯ ಪಕ್ಷಗಳು ಒಂದೇ ದನಿಯಲ್ಲಿ ನಕ್ಸಲ್ಗಳನ್ನು ವಿರೋಧಿಸುವ ಭೂಮಿಕೆಯನ್ನ ನಿರ್ವಹಿಸುತ್ತಿರುವುದು ರಾಜಕಾರಣದಫಲವಾಗಿ ಅಲ್ಲದೇಕುಸಿಯುತ್ತಿರುವ ಕಾನೂನು ವ್ಯವಸ್ಥೆಯ ಅಂಶದಿಂದಾಗಿಕಾನೂನು ವ್ಯವಸ್ಥೆಯ  ರಾಜಕೀಯ ಆಯಾಮನಕ್ಸಲ್ಗಳಿಗೂ ಗೊತ್ತುಆದರೆ ಅವರಿಗೆ ಇದು -  ಕುಸಿತ - ಮೂಲಭೂತ ಪ್ರಶ್ನೆಯೇ ಅಲ್ಲಬದಲಿಗೆ ಅವರು  ಕಾನೂನು ವ್ಯವಸ್ಥೆಯಸ್ವರೂಪವನ್ನೇ ಪ್ರಶ್ನಿಸುತ್ತಾರೆಯೇ ಹೊರತು ತಮ್ಮಿಂದ ವ್ಯವಸ್ಥೆಗೆ ಭಂಗ ಬಂದಿದೆಯೆಂದು ಒಪ್ಪಲು ಅವರು ಸಿದ್ಧರಿಲ್ಲ.. ಎಂದು ರಬೀಂದ್ರರೇ ಹೇಳುತ್ತಾರೆ.

 ಪ್ರಜಾಕೋರ್ಟುಗಳುಪರ್ಯಾಯ ಕಾನೂನು ವ್ಯವಸ್ಥೆಯನ್ನು ಚೆನ್ನಾರೆಡ್ಡಿಯಂತಹ ಚೆನ್ನಾರೆಡ್ಡಿಯೂ ಗಮನಿಸಿ - ನಕ್ಸಲ್ ಜಿಲ್ಲೆಗಳಲ್ಲಿ -ಅಂದರೆ ಪ್ರಜಾಕೋರ್ಟುಗಳು ನಡೆಯುತ್ತಿರುವ ಜಿಲ್ಲೆಗಳಲ್ಲಿ ಸಂಚಾರಿ ನ್ಯಾಯಾಸ್ಥಾನಗಳನ್ನು ಒದಗಿಸುವುದಾಗಿ ಹೇಳಿದರುಅಂದರೇನು?ಯಾರಾದರೂ ವ್ಯವಸ್ಥೆಯನ್ನೇ ಧಿಕ್ಕರಿಸಿ ಶಸ್ತ್ರಾಸ್ತ್ರ ಕೈಗೆತ್ತಿಕೊಂಡಾಗ ಮಾತ್ರವೇ  ಪ್ರಾಂತದಲ್ಲಿ ಸುಧಾರಣೆ ಆಗುವುದೆಂದೇಇಡೀರಾಜ್ಯದಲ್ಲಿ ಶಕ್ತ ನ್ಯಾಯಾಂಗ ಇರಬೇಕೆಂದು ವ್ಯವಸ್ಥೆಗೆ ಅನ್ನಿಸುವುದಿಲ್ಲವೇಕೆಇದನ್ನ ಗಮನಿಸಿದರೆ ಅಡಗನಿದೇ ಅಮ್ಮ ಕೂಡಾಪೆಟ್ಟದು (ಕೇಳದಿದ್ದರೆ ತಾಯಿಯೂ ಉಣಿಸುವುದಿಲ್ಲಎಂಬ ತೆಲುಗು ಮಾತು ನೆನಪಿಗೆ ಬರುತ್ತದೆ. (ಚೆನ್ನಾರೆಡ್ಡಿಯ ಮಾತು ಆತನಕಾಲದಲ್ಲಲ್ಲದೇ ಈಗಿನ ಚಂದ್ರಬಾಬುವಿನವರಗೂ ನಿಜವಾಗಿಲ್ಲವಂಬುದು - ಆಡುವ ಮಾತಿಗೂ ಮಾಡುವ ಕೃತಿಗೂ ಇರುವ ಅಂತರವನ್ನಸೂಚಿಸುತ್ತದೇನೋ.)

ಶಸ್ತ್ರಾಸ್ತ್ರ ಚಳವಳಿ ಮಾಡುವವರಿಗೆ ಮಾವೋ ತ್ಸೆ ತುಂಗ ಗೆರಿಲ್ಲಾ ವಾರ್ಫೇರ್ ಮತ್ತು ಅದೇ ಹೆಸರಿನ ಚೆ ಗವೇರನ ಪುಸ್ತಕ ಆಧಾರಗ್ರಂಥಗಳಾಗಿವೆ ಪುಸ್ತಕಗಳಲ್ಲಿ ಕಾಡಿನಲ್ಲಿದ್ದು ರಾಜಕೀಯಕ್ಕಾಗಿ ಶಸ್ತ್ರಾಸ್ತ್ರ ಚಳವಳಿ ನಡಸುವುದಕ್ಕೂನಗರ ಪ್ರಾಂತದಲ್ಲಿದ್ದುನಡೆಸುವುದಕ್ಕೂ ಇರುವ ವ್ಯತ್ಯಾಸಅನುಕೂಲಅನಾನುಕೂಲಗಳನ್ನು ವಿವರವಾಗಿ ಚರ್ಚಿಸಲಾಗಿದೆಜನಬೆಂಬಲವನ್ನಒಂದಂಶದವರೆಗೂ ಪಡೆದ ನಕ್ಸಲ್ಗಳು ಅಡವಿಗಳ ಆದಿಲಾಬಾದ್ಕಾಡುಮೇಡಿನ ಮೆದಕ್ ಜಿಲ್ಲೆಗಳಲ್ಲೇ ಇದ್ದಾರೆಅಂದರೆ:ಕಾಡುಮೇಡಿಲ್ಲದ ಜಾಗದಲ್ಲಿ ಚಳವಳಿ ಬೇಡವೆಂದೇತೆಲಂಗಾಣಾ ರೈತ ಚಳವಳಿ ಉದ್ಭವಿಸಿದ ಕಲ್ಲುಬಂಡೆಗಳ ನಲ್ಲಗೊಂಡದಲ್ಲಿ ಏಕೆಸಂಘದವರು ಆದಿಲಾಬಾದಿನಷ್ಟು ಶಕ್ತರಾಗಿಲ್ಲ?

ಜನತಂತ್ರದ ಸಿದ್ಧಾಂತದಲ್ಲಿ ಸಂಪೂರ್ಣ ನಂಬಿಕೆ ಕಳೆದುಕೊಂಡುಅದನ್ನು ಬದಲಿಸಹೊರಡದೇಅದರ ಭಾಗವಾಗಿಯೂ ಉಳಿಯದೆಯೇಪರ್ಯಾಯ ಸರಕಾರವನ್ನೂಪರ್ಯಾಯ ನ್ಯಾಯವ್ಯವಸ್ಥೆಯನ್ನೂ ನಿರ್ಮಿಸುವಲ್ಲಿ ಒಂದಂಶದಮಟ್ಟಿಗೆ ಸಫಲರಾಗಿರುವ ನಕ್ಸಲ್ಗಳುತಾವೇ ಒಂದು ವ್ಯವಸ್ಥೆಯಾಗಿ ಕೆಲ ಮೂಲಭೂತ ಪ್ರಶ್ನೆಗಳನ್ನು ನಮ್ಮ ಮುಂದೊಡ್ಡುತ್ತಾರೆ.



ಪ್ರಜಾತಂತ್ರದ ಎಲ್ಲ ಫಲಗಳನ್ನೂ ಅನುಭವಿಸುತ್ತಸ್ವಂತ ಹಣವನ್ನು ಸಮಸಮಾಜದ ನಿರ್ಮಾಣಕ್ಕಾಗಿ ಎಂದೂ ವ್ಯಯಮಾಡಲುಇಚ್ಛಿಸದನಕ್ಸಲ್ ಚಳವಳಿಯಂತಹ ಚಳವಳಿಗಳ ಬಗೆಗೆ ಚಕಿತನಾಗಿಇಂಥ ಚಳವಳಿಯ ಅವಶ್ಯಕತೆಯ ಬಗ್ಗೆ ಗಂಟೆಗಟ್ಟಲೆಮಾತಾಡಬಲ್ಲಅಂಥ ಚಳವಳಿಯೊಂದರಲ್ಲಿ ಸಕ್ರಿಯವಾಗಿ ಭಾಗವಹಿಸಲು ಧೈರ್ಯವಿಲ್ಲದಚಿಟಿಕೆ ಹೊಡೆವಲ್ಲಿ ದೇಶದ ಯಾವುದೇಸಮಸ್ಯೆಗೆ ಪರಿಹಾರ ನೀಡುವಮೇಲಾಗಿ ಬಂಡವಾಳಶಾಹಿಗಳ ಕಾಶಿ ಎನ್ನಿಸಿಕೊಂಡ - ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನಲ್ಲಿಹಣಕಾಸುಲಾಭನಷ್ಟಗಳ ಬಗ್ಗೆ ವೈಭವದಿಂದ ಪಾಠಮಾಡುವಬಾಯಿಮಾತಿನ ಕ್ರಾಂತಿಕಾರಿಯಾದಚಿಲ್ಲರೆ ಬೂರ್ಜ್ವಾಬುದ್ಧಿಜೀವಿಯಾದ ನಾನು - ಮಧ್ಯಮ ವರ್ಗದ ಆರಾಮಕುರ್ಚಿಯ ಕ್ರಾಂತಿಯ ಕನಸನ್ನು ನನಸು ಮಾಡ ಹೊರಟಿರುವ  ನಕ್ಸಲ್ಗಳಕಾವ್ಯನ್ಯಾಯದ ನೀತಿಯನ್ನು ಪ್ರಶ್ನಿಸಲು ಯಾವುದೇ ಆಧಾರ ಇಲ್ಲದಾಗ್ಯೂ -  ಕೆಲಸವನ್ನ ಭಂಡತನದಿಂದ ಮಾಡ ಹೊರಟಿದ್ದೇನೆ.

 ಪುಸ್ತಕದಲ್ಲಿ ಟೀಕಿಸಿರುವ ಸಂಸ್ಥೆಗಳೇ ಇದರ ಬರವಣಿಗೆಗಾಗಿ ಆಹಾರ ಒದಗಿಸಿವೆಪ್ರತಿದಿನ ಮುಂಜಾನೆ ಅಮುಲ್ ಬೆಣ್ಣೆಚೀಸ್ಬಳಿದ ಸ್ಯಾಂಡ್ವಿಚ್ಗಳನ್ನು ಮೆಲ್ಲುತ್ತಭಾರತದ ಬಡಮಕ್ಕಳ ಆಹಾರ ಪೌಷ್ಠಿಕತೆಯ ಕೊರತೆಯ ಬಗ್ಗೆ ಬರೆಯುತ್ತಲೇ - ಕನಿಷ್ಠಪೌಷ್ಠಿಕತೆಗೆ ಅವಶ್ಯವಾದದನ್ನೂ ಮೀರಿ ಆಪರೇಷನ್ ಫ್ಲಡ್ ಹಾಲನ್ನು ಕುಡಿದಿದ್ದೇನೆಇದು ಪರಿಸ್ಥಿತಿಯ ವೃತ್ತಾಂಯಾರೆಲ್ಲಾಮಹಾಪೂರವನ್ನ ಶಪಿಸುವರೋಕುಡಿಯುವ ನೀರನ್ನು ಅಲ್ಲಿಂದಲೇ ಪಡೆಯವರು. ಎಂಬ ಶಾಂತಿ ಜಾರ್ಜ್ ವಾಕ್ಯಗಳನ್ನು ಓದಿದಾಗಟೀಕೆ ಟಿಪ್ಪಣಿ ಬರೆಯಲು ಧೈರ್ಯವೂ ಬರುವುದು.

ನಾವು ನಕ್ಸಲ್ಗಳ ಕಾರ್ಯಸ್ವರೂಪವನ್ನುಸಿದ್ಧಾಂತವನ್ನು ಎರಡು ನಲೆಗಳಲ್ಲಿ ಪ್ರಶ್ನಿಸಬಹುದು.

ಒಂದು:
ಸೈದ್ಧಾಂತಿಕವಾಗಿ ಹಿಂಸಾವಾದವನ್ನು ಪ್ರಚೋದಿಸುತ್ತಾರೆಂಬ ಅಂಶಕ್ಕೆ ಸಂಬಂಧಿಸಿದ್ದುವಿರುದ್ಧ ಧೃವಗಳಲ್ಲಿ ಆಲೋಚಿಸುವಪ್ರಸ್ತುತವ್ಯವಸ್ಥೆಯೊಂದಿಗೆ ಮೂಲಭೂತ ವ್ಯತ್ಯಾಸಗಳಿರುವ ನಕ್ಸಲ್ಗಳು ಭಯೋತ್ಪಾದಕರಿಗೆ ಹತ್ತಿರದವರಾಗುತ್ತಾರೆಅವರು ಎಷ್ಟೇ ಜನರ ಪ್ರೀತಿವಿಶ್ವಾಸ ಗಳಿಸಿದರೂನಿರಂತರ ಭೀತಿಯ ಆಳ್ವಿಕೆ ಮೂಲಭೂತವಾದಿಯಾಗುತ್ತದೆಹಾಗೂ ಅವರ ಪರ್ಯಾಯ ವ್ಯವಸ್ಥೆಯೇ ಒಂದುವ್ಯವಸ್ಥೆಯಾಗೂ ಪರಿವರ್ತನೆಗೊಳ್ಳುತ್ತದೆ. (ಉದಾಹರಣೆಗೆ ಕಮ್ಯುನಿಸ್ಟ್ ರಷ್ಯಾದ ಪ್ರೋತ್ಸಾಹದೊಂದಿಗೆ ರಾರಾಜಿಸಿದ ಆಫಘಾನಿಸ್ತಾನದನಜೀಬುಲ್ಲಾನಿಗೆ ವಿರುದ್ಧವಾಗಿ ಕ್ರಾಂತಿಯ ಮಾತುಗಳನ್ನೇ ಆಡುತ್ತ ಬಂದ ಹೋರಾಟಗಾರರು ಯಾರುಬೇರಾರೂ ಅಲ್ಲ - ತಾಲಿಬಾನ್.ಹೀಗಾಗಿ ಈಗಿರುವ ರೋಗಕ್ಕೆ ಕೊಡಬೇಕಾದ ಮದ್ದಿನ ಸೈಡ್ ಎಫೆಕ್ಟ್ ಏನೆಂಬುದನ್ನು ಯೋಚಿಸಬೇಕೇನೋಮದ್ದೇ ಮತ್ತೊಂದುರೋಗವಾಗಿ ಪರಿವರ್ತಿತಗೊಳ್ಳದಂತೆ ನೋಡಿಕೊಳ್ಳುವುದು ಹೇಗೆ?)

ಎರಡು:
ನಕ್ಸಲ್ಗಳ ಸಿದ್ಧಾಂತವೇ ಸರ್ವಶೂನ್ಯವಾದಕ್ಕೆ (nihilismಸಮೀಪದ್ದು ಎಂಬ ಟೀಕೆ೧೭೯೧ರಲ್ಲಿ ಸರ್ವಶೂನ್ಯವಾದ ಎಂಬ ಪದ ಬಳಕೆಗೆಬಂದಾಗ ಅದನ್ನು ಒಂದು ಗುರಿಯಿಲ್ಲದಒಂದು ಸ್ಪಷ್ಟ ದಿಕ್ಕಿನತ್ತ ಸಾಗದಿರುವ ಕ್ರಾಂತಿಕಾರಿ ಎಂಬರ್ಥದಲ್ಲಿ ಬಳಕೆಯಾಯಿತುಆದರೆನೀತ್ಸೆಯ ಸಮಯಕ್ಕೆ ಅವನು ಅದರ ಅರ್ಥವನ್ನು ಮೂಲಭೂತ ನಾಸ್ತಿಕತೆ ಎಂಬರ್ಥದಲ್ಲಿ ಬಳಸಿದನಕ್ಸಲ್ಗಳ ಗುರಿ ಮತ್ತು ಗದ್ದರ್ಮೂಲಕ ಬಂದಿರುವ ಹುಸಿ ಜನತಂತ್ರದಲ್ಲಿ ಖೋಟಾ ಚುನಾವಣಾ ವ್ಯವಸ್ಥೆಯಲ್ಲಿ ನಮಗೆ ನಂಬಿಕೆಯಿಲ್ಲನೂತನ ಪ್ರಜಾಸತ್ತಾತ್ಮಕಕ್ರಾಂತಿ ನಮ್ಮ ಗುರಿ ಎಂಬ ಮಾತುಗಳು ೧೭೯೧ರ ಸರ್ವಶೂನ್ಯವಾದಿಗಳ ವ್ಯಾಪ್ತಿಯಲ್ಲಿ ನಕ್ಸಲ್ಗಳನ್ನು ತೂರಿಸಿಬಿಡುತ್ತದೆ.

ನಕ್ಸಲ್ಗಳ ಅವಫಲತೆ ಇರುವುದು  ಪ್ರಪಂಚವನ್ನು ಅರ್ಥೈಸುವಲ್ಲಿ ಅವರು ಮಾಡಿರುವ ಮೂಲಭೂತ ತಪ್ಪಿನಲ್ಲಿದೆಹಾಗೂ ಇಂಥಅರ್ಥೈಸುವಿಕೆಯಿಂದ ಹೊಮ್ಮಿಬಂದಿರುವ ತಪ್ಪಾದ ಕಾರ್ಯರೂಪದಲ್ಲಿ ಅದು ಕಾಣಿಸಿಕೊಳ್ಳುತ್ತದೆ. ಎಂದು ಬಿಪ್ಲಬ್ ದಾಸ್ಗುಪ್ತಾಹೇಳುತ್ತಾರೆನಕ್ಸಲ್ಗಳು ಪರ್ಯಾಯ ವ್ಯವಸ್ಥೆಯೊಂದನ್ನು ಕೊಡಬಲ್ಲರೇ ಇಲ್ಲವೇ ಎಂಬುದು ಪ್ರಶ್ನೆಯೇ ಅಲ್ಲಅವರು ಅಂಥವ್ಯವಸ್ಥೆಯನ್ನು ಕೊಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ನಿರೂಪಿಸಿಬಿಟ್ಟಿದ್ದಾರೆಆದರೆ ಅಂಥ ವ್ಯವಸ್ಥೆಯನ್ನ ನೀಡಬಲ್ಲೆವೆಂಬ ಭಾವನೆಅವರಲ್ಲಿ ಇರುವುದಂತೂ ನಿಜ ಎಂದು ರಬೀಂದ್ರ ರೇ ಹೇಳುತ್ತಾರೆ.

ಮೇಲಿನ ಸೈದ್ಧಾಂತಿಕ ಕಾರಣಗಳು ಒಂದೆಡೆಯಾದರೆ -
ದಿನದಿನಕ್ಕೆ ತಮ್ಮಲ್ಲಿನ ಸೈದ್ಧಾಂತಿಕ ಮತ್ತು ಒಮ್ಮೊಮ್ಮೆ ಖಾಸಗೀ ಕಾರಣಗಳಿಗಾಗಿಪಂಥವಾಗಿಗುಂಪಾಗಿಹೋಳಾಗಿಹಾಳಾಗಿಹೋಗುತ್ತಿರುವ ನಕ್ಸಲ್ಗಳು ನಮ್ಮಲ್ಲಿ ಆಶಾವಾದವನ್ನೇನೂ ಉದ್ದೀಪಿಸುವುದಿಲ್ಲ೧೯೮೫ರಲ್ಲಿ ಪ್ರಕಾಶ್ ಕರಾತ್ ನಡೆಸಿದ ಒಂದುಅಧ್ಯಯನದ ಪ್ರಕಾರ ನಕ್ಸಲ್ಗಳಲ್ಲಿ ೧೫ ಪುಟ್ಟ ಗುಂಪುಗಳೂ ದೊಡ್ಡ ಗುಂಪುಗಳೂ ಇದ್ದುವುಅವುಗಳಲ್ಲಿ ತೆಲಂಗಾಣದಲ್ಲೇ  ದೊಡ್ಡ, ಪುಟ್ಟ ಗುಂಪುಗಳು  ನಕ್ಸಲ್ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದುವೆಂದರೆಒಂದೊಂದು ಗುಂಪೂ ಎಷ್ಟು ಗ್ರಾಮಗಳಪಾಳೇಗಾರಿಕೆ ಮಾಡುತ್ತಿದ್ದಿರಬಹುದೆಂದು ಲೆಕ್ಕ ಹಾಕಬಹುದುಅವುಗಳೂ ಕೂಡದಳಗಳಾಗಿ ಹಂಚಿಹೋಗಿ ತಮ್ಮ ಇಲಾಖೆಗಳನ್ನುಸ್ಪಷ್ಟವಾಗಿ ಹಂಚಿಕೊಂಡು  ಪ್ರಕಾರವಾಗಿ ಅನಧಿಕಾರ (ಅನಧಿಕೃತವಾಗಿ ಅಧಿಕಾg) ಚಲಾಯಿಸುತ್ತಿದ್ದಾರೆ.

ಜೀವ ತೆಗೆಯುವುದೇ ಸರಳೋಪಾಯ ಎನ್ನಿಸಿದವರಿಗೆ ಶತ್ರುಗಳನ್ನು ನಾಮಾವಶೇಷ ಮಾಡುವುದು ಸರಳವಾಗುವುದುವರ್ಗ ಶತ್ರುಗಳಜೀವ ತೆಗೆಯುವುದೊಂದುಕಡೆಯಾದರೆ - ಅಂಥದೇ ಶತ್ರುವಿನ ವಿರುದ್ಧ ಕತ್ತಿ ಎತ್ತಿರುವ ಸೈದ್ಧಾಂತಿಕ ಶತ್ರುವಿನ ಜೀವ ತೆಗೆಯುವುದುಬೇರೆಯೇ ವಿಚಾರವಾಗುತ್ತದೆಇದೇ ಸರಳೋಪಾಯವಾಗಿ ಮುಂದುವರೆದು ಒಂದು ವ್ಯಸನವಾಗುವ ಮಾತು ದೂರದ್ದೇನೂ ಅಲ್ಲ.

 ಎಲ್ಲದರ ಮಧ್ಯೆ ನಕ್ಸಲ್ಗಳ ಹೆಸರಿನಲ್ಲಿ ದಾರಿಹೋಕರನ್ನು ದರೋಡೆ ಮಾಡುವವರೂನಕ್ಸಲ್ ಕಥೆಗಳನ್ನು ತಮ್ಮದಾಗಿಸಿಕೊಂಡುಸಿನೇಮಾ ಮಾಡುವವರೂ ಬೇರೆ ರೀತಿಯಲ್ಲಿ ಜನರನ್ನ ಮನರಂಜಿಸಿ ದೋಚಿ ತಮ್ಮ ಕಾರ್ಯಸಾಧಿಸಿಕೊಳ್ಳುತ್ತಾರೆ. (ಅಂಥಸಿನೇಮಾವೊಂದಕ್ಕೆ ಕ್ರಾಂತಿಕಾರಿ ಗದ್ದರ್ ಕಂಠದಾನ ಮಾಡಿಹಾಡುಗಳನ್ನ ಹಾಡಿದ - ಅದೇಕಾರಣವಾಗಿ ಪಿ.ಡಬ್ಲು.ಜಿ ಯಿಂದಬಹಿಷ್ಕೃತಗೊಂಡದ್ದುನಂತರ ಮಾಫಿ ಆದರೂ ಆತ ವಾಪಸ್ಸಾಗದಿದ್ದದ್ದುಈಚೆಗೆ ಅವರ ಪರವಾಗಿ ಸರಕಾರದೊಂದಿಗೆ ಶಾಂತಿಯಮಾತುಕತೆ ನಡೆಸುತ್ತಿರುವುದು...  ಎಲ್ಲವೂ ಗೊಂದಲಮಯ ವಿಪರ್ಯಾಸವಾಗಿ ಕಾಣಿಸುತ್ತದೆ.)

ತಮ್ಮತಮ್ಮಲ್ಲೇ ಇರುವ ಮಾರ್ಕ್ಸಿಸ್ಟ್-ಲೆನಿನಿಸ್ಟ್-ಮಾವೋಯಿಸ್ಟ್ ಸಿದ್ಧಾಂತಕ್ಕೆ ಹಲವು ಮಾರ್ಗಗಳನ್ನ ಹಲವು ಪಂಥಗಳಹಲುವುಗುಂಪುಗಳ ಮೂಲಕ ಕಂಡುಕೊಂಡಿರುವ ನಕ್ಸಲ್ಗಳು ಒಂದೇ ಮಾರ್ಗದಲ್ಲಿ ನಡೆಯದಿದ್ದರೆ ಅವರ ಹಾದಿ ಕಡಿದಾಗುತ್ತದೆಂದು ಚರಿತ್ರೆಅವರಿಗೆ ತಿಳಿಸಿದೆಹಾಗೂ ಅವರ ರಕ್ಷಣೆಗೆ ಕಾಳೀ ಮಾ ಳೇ ಇಳಿದು ಬರಬೇಕಾಗುತ್ತದೆ.

ಹಾಗೂ:
 ಸರ್ವಶೂನ್ಯವಾದಿಗಳು - ಅಂದರೆ ಮೂಲಭೂತ ನಾಸ್ತಿಕರು - ಕಾಳೀಮಾಳ ಸೆರಗಿನಡಿಯಲ್ಲಿ ಮಾವೋ ತೊ ನಕ್ಸಲ್ ಎಂಬಬೀಜಮಂತ್ರ ಜಪಿಸುತ್ತಾರಕ್ತಕ್ರಾಂತಿಯ ಮಾತುಗಳನ್ನಾಡುತ್ತಾ ಒಂದೆರಡು ಕುರಿಗಳನ್ನು ಮಾ ಗಾಗಿ ಬಲಿದಾನ ಮಾಡಿಆದಿಲಾಬಾದಿನಅಡವಿಯಲ್ಲಿ ಪೋಲೀಸರ ಗುರಿಯಾಗಿಜನರ ಭೀತಿಯಾಗಿಆಶಾವಾದವಾಗಿನಿರಾಶಾವಾದವಾಗಿಏನೆಲ್ಲಾ ಆಗಿಯೂ ಏನೂ ಆಗದೇಉಳಿಯಬೇಕಾಗುತ್ತದೆ.



ಆರು ವರ್ಷಗಳ ಹಿಂದೆ ಹೈದರಾಬಾದ್ನಗರ ಹೊಕ್ಕಾಗಮೊದಲ ಬಾರಿಗೆ ಕೆಂಪು ಅಕ್ಷರಗಳಲ್ಲಿ ಬರೆದಿದ್ದ ಮಾವೋ ತ್ಸೆ ತುಂಗನವೇದವಾಕ್ಯ "Power comes out of the barrel of a gun'ಗೋಡೆ ಗೋಡೆಯ ಮೇಲೆ ಕಂಡಿದ್ದೆಅಂದು  ಪದಗಳುಅರ್ಥವಾಗಿರಲಿಲ್ಲಆರು ವರ್ಷಗಳ ಕಾಲ ನಕ್ಸಲ್ ಚಳವಳಿಯನ್ನ ಹೊರಗಿನವನಾಗಿ ಗಮನಿಸಿದೆಇಂದೂ  ಪದಗಳು ನನಗೆ ಇನ್ನೂಅರ್ಥವಾಗುತ್ತಿಲ್ಲ.

ನವಂಬರ್೧೯೯೦.